ADVERTISEMENT

ವಾಚಕರ ವಾಣಿ: ನಿರ್ಗತಿಕರ ಯೋಚನೆ ಬರಲಿಲ್ಲವೇ?

​ಪ್ರಜಾವಾಣಿ ವಾರ್ತೆ
Published 2 ಮೇ 2021, 20:00 IST
Last Updated 2 ಮೇ 2021, 20:00 IST

ಭಿಕ್ಷಾಟನೆ ಮಾಡುವ ಮಕ್ಕಳು ಲಾಕ್‌ಡೌನ್‌ನಿಂದಾಗಿ ಹಸಿವಿನಿಂದ ಕಂಗೆಟ್ಟು, ಜನರು ಕುಡಿದು ಬಿಸಾಡಿದ್ದ ಎಳನೀರಿನ ಕಾಯಿಗಳನ್ನು ಆಯ್ದು ತಿನ್ನುತ್ತಿದ್ದ ಅಮಾನವೀಯ ಸುದ್ದಿಯನ್ನು (ಪ್ರ.ವಾ., ಏ. 30) ಓದಿ ಮನಸ್ಸಿಗೆ ತುಂಬಾ ನೋವಾಯಿತು. ಕೊರೊನಾ ಸೋಂಕನ್ನು ತಡೆಯಲು ಸರ್ಕಾರ 14 ದಿನಗಳ ಲಾಕ್‌ಡೌನ್‌ ಜಾರಿ ಮಾಡಿದೆ. ಈ ಸಮಯದಲ್ಲಿ ಏನು ತೆರೆದಿರುತ್ತದೆ ಏನು ತೆರೆದಿರುವುದಿಲ್ಲ ಎಂಬುದನ್ನು ಸವಿಸ್ತಾರವಾಗಿ ಒಳಗೊಂಡ ಮಾರ್ಗಸೂಚಿ ಸಿದ್ಧಪಡಿಸಿದ ಸರ್ಕಾರಕ್ಕೆ, ರಸ್ತೆ ಬದಿಯ ನಿರ್ಗತಿಕರ ಹಸಿವನ್ನು ನೀಗಿಸುವ ಕುರಿತು ಕಿಂಚಿತ್‌ ಯೋಚನೆಯೂ ಬಾರದಿದ್ದುದು ನೋವಿನ ಸಂಗತಿ.

ಕೋವಿಡ್ ಸೋಂಕಿಗಿಂತ ಹಸಿವಿನಿಂದ ಸಾಯುವುದು ಘೋರವಾದುದು. ಎಲ್ಲರಂತೆ 14 ದಿನಗಳಿಗಾಗುವಷ್ಟು ಆಹಾರ ಅಥವಾ ಹಣವನ್ನು ಸಂಗ್ರಹಿಸುವ ಸಾಮರ್ಥ್ಯ ನಿರ್ಗತಿಕರಲ್ಲಿ ಇರುವುದಿಲ್ಲ. ಅವರು ಹೊಟ್ಟೆ ತುಂಬಿಸಿಕೊಳ್ಳಲು ದಿನವೂ ಹೆಣಗಾಡಬೇಕಾಗಿರುತ್ತದೆ. ಇಂತಹವರ ಹೊಟ್ಟೆ ಮೇಲೆ ಬರೆ ಎಳೆಯದೆ ಸರ್ಕಾರ ಕೂಡಲೇ ನಿರ್ಗತಿಕ ಕೇಂದ್ರಗಳನ್ನು ತೆರೆದು, ಅವರ ಹಸಿವನ್ನು ನೀಗಿಸಲಿ.

ಶ್ರೀಧರ ಎಸ್. ವಾಣಿ,ಕೊಪ್ಪಳ

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.