ADVERTISEMENT

ಜನ ತಿಳಿಯಬಯಸುವುದು ಏನೆಂದರೆ...

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2022, 19:45 IST
Last Updated 4 ನವೆಂಬರ್ 2022, 19:45 IST

ಚುನಾವಣೆ ಸಮೀಪಿಸಿದಾಗ ರಾಜಕಾರಣಿಗಳ ಪಕ್ಷಾಂತರದ ಭರಾಟೆ ಬಲು ಜೋರು. ಪ್ರಜಾಪ್ರಭುತ್ವದಲ್ಲಿ ನಿಸ್ಸಂದೇಹವಾಗಿ ಅವರು ಆ ವಿಚಾರದಲ್ಲಿ ಸ್ವತಂತ್ರರು. ಆದರೆ ಜನ ಇಷ್ಟನ್ನು ಮಾತ್ರ ತಿಳಿಯಬಯಸುತ್ತಾರೆ. ‘ನೀವು ತ್ಯಜಿಸುತ್ತಿರುವ ಪಕ್ಷದಲ್ಲಿ ನೀವು ಗುರುತಿಸಿರುವ ಯಾವ್ಯಾವ ನ್ಯೂನತೆಗಳಿವೆ? ಸೇರುತ್ತಿರುವ ಪಕ್ಷದಲ್ಲಿ ನಿಮಗೆ ಮನವರಿಕೆಯಾದ ಜನಸ್ನೇಹಿ ಧೋರಣೆ, ಸಿದ್ಧಾಂತಗಳು ಯಾವುವು? ನೀವು ಸೇರ್ಪಡೆಯಾಗುವ ಪಕ್ಷದಲ್ಲಿ ನಿಮಗೆ ಮೊದಮೊದಲಿಗಾದರೂ ಅಧಿಕಾರ ಸ್ಥಾನಗಳಿಗೆ ಹಂಬಲಿಸದ ಆತ್ಮವಿಶ್ವಾಸವಿದೆಯೇ ಮತ್ತು ಆ ಕುರಿತು ಭರವಸೆ ನೀಡುವಿರಾ?’

- ಬಿಂಡಿಗನವಿಲೆ ಭಗವಾನ್, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT