ADVERTISEMENT

ತಿಳಿದೂ ಮಾಡುವ ಕೊಲೆಗೆ ಸಮ

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2021, 19:30 IST
Last Updated 22 ಡಿಸೆಂಬರ್ 2021, 19:30 IST

ಇತ್ತೀಚೆಗೆ ಶೌಚಗುಂಡಿಯಲ್ಲಿ ಮತಪಟ್ಟ ಇಬ್ಬರು ಪೌರಕಾರ್ಮಿಕರ (ಪ್ರ.ವಾ., ಡಿ. 21 ಮತ್ತು ಪ್ರ.ವಾ., ಡಿ. 22) ಬಗ್ಗೆ ತಿಳಿದು ದುಃಖವಾಗಿದೆ. ಮನುಷ್ಯರನ್ನು ಹೀಗೆ ಶೌಚಗುಂಡಿಗೆ ಇಳಿಸುವುದು ಅಪರಾಧ. ಶೌಚಗುಂಡಿಯನ್ನು ಕೇವಲ ಯಂತ್ರಗಳಿಂದ ಸ್ವಚ್ಛಪಡಿಸಬೇಕೆಂಬ ಕಾನೂನು ಇದ್ದರೂ ಸಂಬಂಧಪಟ್ಟ ಅಧಿಕಾರಿಗಳು ಈ ವಿಷಯದಲ್ಲಿ ತಲೆಕೆಡಿಸಿಕೊಳ್ಳದಿರುವುದು ವಿಷಾದದ ಸಂಗತಿ. ಇನ್ನೂ ಕೆಲವರು ಪೌರಕಾರ್ಮಿಕರಿಗೆ ‘ನಿನ್ನ ಕೆಲಸವೇ ಅದು, ನೀನು ಮಾಡಲೇಬೇಕು’ ಎಂದು ಹೇಳಿರುವುದೂ ವರದಿಯಾಗಿದೆ.

ಮೈಸೂರು, ಬೆಂಗಳೂರು ನಗರಗಳಲ್ಲೇ ಹೀಗಾದರೆ ಗ್ರಾಮಗಳ ಚಿತ್ರಣ ಹೇಗಿರಬಹುದು. ಊಹಿಸಲು ಅಸಾಧ್ಯ. ಇದರಿಂದ ರೋಸಿಹೋದ ನೊಂದ ವ್ಯಕ್ತಿಯೇನಾದರೂ ಬೇರೆ ಮತಕ್ಕೆ ಸೇರಿಕೊಂಡ ಎನ್ನಿ, ಆಗ ಇದೊಂದು ಬಲವಂತದ ಮತಾಂತರ ಎಂದು ಯಾರೋ ‘ನೈತಿಕ ಪೊಲೀಸರು’ ಕೊಟ್ಟ ದೂರಿನನ್ವಯ ಆತನನ್ನು ಮತ್ತೆ ‘ಘರ್ ವಾಪಸಿ’ ಮಾಡಿ, ‘ನಿನ್ನ ಕೆಲಸವೇ ಅದು’ ಎನ್ನುತ್ತಾ ಮತ್ತದೇ ಶೌಚಗುಂಡಿ ತೊಳಿಯಲು ಹಚ್ಚುತ್ತಾರೆ.

ಇದುವರೆಗೂ ಅನೇಕರು ಇದೇ ರೀತಿ ಸತ್ತಿದ್ದಾರೆ. ಇದು ಕಾನೂನುಬಾಹಿರ ಕೃತ್ಯವಾಗಿದ್ದು, ತಿಳಿದೂ ಮಾಡುವ ಕೊಲೆಗೆ ಸಮ. ಆದರೆ ಈವರೆಗೂ ಒಬ್ಬರಿಗಾದರೂ ಶಿಕ್ಷೆ ಆಗಿದೆಯೇ?

ADVERTISEMENT

-ರವಿಕಿರಣ್ ಶೇಖರ್, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.