ADVERTISEMENT

ಕೆಪಿಎಲ್‌ಗೆ ನಾಲ್ವರು ಹೊಸ ನಾಯಕರು

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2019, 19:45 IST
Last Updated 10 ಆಗಸ್ಟ್ 2019, 19:45 IST
ತಂಡಗಳ ಆಟಗಾರರು (ನಿಂತವರು–ಎಡದಿಂದ) ಸಿ.ಎಂ.ಗೌತಮ್‌ (ಬಳ್ಳಾರಿ ಟಸ್ಕರ್ಸ್‌), ಭರತ್ ಚಿಪ್ಲಿ (ಬಿಜಾಪುರ ಬುಲ್ಸ್‌), ಅಮಿತ್ ವರ್ಮಾ (ಮೈಸೂರು ವಾರಿಯರ್ಸ್‌), ಟೂರ್ನಿಯ ರಾಯಭಾರಿ ರಾಗಿಣಿ ದ್ವಿವೇದಿ, ಮಿರ್ ಕೌನೇನ್ ಅಬ್ಬಾಸ್ (ಬೆಳಗಾವಿ ಪ್ಯಾಂಥರ್ಸ್‌), ಆರ್‌.ಜೊನಾಥನ್ (ಬೆಂಗಳೂರು ಬ್ಲಾಸ್ಟರ್ಸ್‌) ಮತ್ತು ಕೆ.ಬಿ.ಪವನ್ (ಹುಬ್ಬಳ್ಳಿ ಟೈಗರ್ಸ್‌); ಫ್ರಾಂಚೈಸ್‌ ಪ್ರತಿನಿಧಿಗಳು (ಕುಳಿತವರು): ಆರ್‌.ಶೈಲೇಶ್‌ (ಟಸ್ಕರ್ಸ್), ಕಿರಣ್ ಕಟ್ಟಿಮನಿ (ಬುಲ್ಸ್‌), ಅರ್ಜುನ್ ರಂಗ (ವಾರಿಯರ್ಸ್‌), ಆರ್‌.ಕುಮಾರ್ (ಲಯನ್ಸ್‌), ಅಲಿ ಅಶ್ಫಾಕ್‌ (ಪ್ಯಾಂಥರ್ಸ್‌), ಮೋಹನ್ ರಾಜು (ಬ್ಲಾಸ್ಟರ್ಸ್‌), ಅಭಿಷೇಕ್ ಜಿಂದಾಲ್ (ಟೈಗರ್ಸ್‌).
ತಂಡಗಳ ಆಟಗಾರರು (ನಿಂತವರು–ಎಡದಿಂದ) ಸಿ.ಎಂ.ಗೌತಮ್‌ (ಬಳ್ಳಾರಿ ಟಸ್ಕರ್ಸ್‌), ಭರತ್ ಚಿಪ್ಲಿ (ಬಿಜಾಪುರ ಬುಲ್ಸ್‌), ಅಮಿತ್ ವರ್ಮಾ (ಮೈಸೂರು ವಾರಿಯರ್ಸ್‌), ಟೂರ್ನಿಯ ರಾಯಭಾರಿ ರಾಗಿಣಿ ದ್ವಿವೇದಿ, ಮಿರ್ ಕೌನೇನ್ ಅಬ್ಬಾಸ್ (ಬೆಳಗಾವಿ ಪ್ಯಾಂಥರ್ಸ್‌), ಆರ್‌.ಜೊನಾಥನ್ (ಬೆಂಗಳೂರು ಬ್ಲಾಸ್ಟರ್ಸ್‌) ಮತ್ತು ಕೆ.ಬಿ.ಪವನ್ (ಹುಬ್ಬಳ್ಳಿ ಟೈಗರ್ಸ್‌); ಫ್ರಾಂಚೈಸ್‌ ಪ್ರತಿನಿಧಿಗಳು (ಕುಳಿತವರು): ಆರ್‌.ಶೈಲೇಶ್‌ (ಟಸ್ಕರ್ಸ್), ಕಿರಣ್ ಕಟ್ಟಿಮನಿ (ಬುಲ್ಸ್‌), ಅರ್ಜುನ್ ರಂಗ (ವಾರಿಯರ್ಸ್‌), ಆರ್‌.ಕುಮಾರ್ (ಲಯನ್ಸ್‌), ಅಲಿ ಅಶ್ಫಾಕ್‌ (ಪ್ಯಾಂಥರ್ಸ್‌), ಮೋಹನ್ ರಾಜು (ಬ್ಲಾಸ್ಟರ್ಸ್‌), ಅಭಿಷೇಕ್ ಜಿಂದಾಲ್ (ಟೈಗರ್ಸ್‌).   

ಬೆಂಗಳೂರು: ಕರ್ನಾಟಕ ಪ್ರೀಮಿಯರ್ ಲೀಗ್‌ (ಕೆಪಿಎಲ್) ಟೂರ್ನಿಯ ಎಂಟನೇ ಆವೃತ್ತಿಯಲ್ಲಿ ಪಾಲ್ಗೊಳ್ಳುವ 7 ತಂಡಗಳ ಪೈಕಿ ನಾಲ್ಕನ್ನು ಈ ಬಾರಿ ಹೊಸ ನಾಯಕರು ಮುನ್ನಡೆಸುವರು. ಶನಿವಾರ ನಡೆದಟ್ರೋಫಿ ಅನಾವರಣ ಕಾರ್ಯಕ್ರಮದಲ್ಲಿ ತಂಡಗಳ ನಾಯಕರ ಹೆಸರನ್ನು ಘೋಷಿಸಲಾಯಿತು.

ಬೆಂಗಳೂರು ಬ್ಲಾಸ್ಟರ್ಸ್ ತಂಡವು ರಾಬಿನ್ ಉತ್ತಪ್ಪ ಬದಲಿಗೆ ಆರ್‌.ಜೊನಾಥನ್ ಹೆಗಲಿಗೆ ನಾಯಕತ್ವವನ್ನು ವಹಿಸಿದೆ. ಬೆಳಗಾವಿ ಪ್ಯಾಂಥರ್ಸ್ ತಂಡ ಸ್ಟುವರ್ಟ್ ಬಿನ್ನಿ ಬದಲಿಗೆ ಮಿರ್ ಕೌನೇನ್ ಅಬ್ಬಾಸ್ ಅವರನ್ನು ನಾಯಕನ್ನಾಗಿ ಮಾಡಿದೆ. ಅಭಿಮನ್ಯು ಮಿಥುನ್ ಶಿವಮೊಗ್ಗ ಲಯನ್ಸ್ ತಂಡವನ್ನು ಮುನ್ನಡೆಸುವರು. ಜೆ.ಸುಚಿತ್ ಬದಲಿಗೆ ಮೈಸೂರು ವಾರಿಯರ್ಸ್ ತಂಡದ ನಾಯಕತ್ವ ಅಮಿತ್ ವರ್ಮಾ ಅವರಿಗೆ ನೀಡಲಾಗಿದೆ.

ಬಿಜಾಪುರ ಬುಲ್ಸ್, ಹುಬ್ಬಳ್ಳಿ ಟೈಗರ್ಸ್ ಹಾಗೂ ಬಳ್ಳಾರಿ ಟಸ್ಕರ್ಸ್ ತಂಡಗಳು ಕ್ರಮವಾಗಿ ಭರತ್ ಚಿಪ್ಲಿ, ಆರ್.ವಿನಯ ಕುಮಾರ್ ಹಾಗೂ ಸಿ.ಎಂ.ಗೌತಮ್ ಅವರನ್ನೇ ನಾಯಕ ಸ್ಥಾನದಲ್ಲಿ ಮುಂದುವರಿಸಿವೆ.

ADVERTISEMENT

ನೆರೆ ಪರಿಹಾರಕ್ಕೆ ಮುಂದು: ನೆರೆಹಾವಳಿಯಿಂದ ತತ್ತರಿಸಿರುವ ಜಿಲ್ಲೆಗಳಿಗೆ ಪರಿಹಾರ ನೀಡಲು ರಾಜ್ಯ ಕ್ರಿಕೆಟ್ ಸಂಸ್ಥೆ ಹಾಗೂ ಕೆಪಿಎಲ್‌ ಫ್ರಾಂಚೈಸ್‌ ಮಾಲೀಕರು ಮುಂದೆ ಬಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.