
ಸಾಂದರ್ಭಿಕ ಚಿತ್ರ
ವಲ್ಸಾಡ್: ಮಾನಸ್ ಎಂ ದವೆ ಶತಕ ಮತ್ತು ಮಲಯ್ ವಿ ಶಾ ಅರ್ಧಶತಕದ ಬಲದಿಂದ ಗುಜರಾತ್ ಕ್ರಿಕೆಟ್ ತಂಡವು ಕೂಚ್ ಬಿಹಾರ್ ಟ್ರೋಫಿ ಕ್ವಾರ್ಟರ್ಫೈನಲ್ ಪಂದ್ಯದಲ್ಲಿ ಕರ್ನಾಟಕದ ಎದುರಿನ ಮೊದಲ ಇನಿಂಗ್ಸ್ನಲ್ಲಿ ಉತ್ತಮ ಮೊತ್ತ ಪೇರಿಸಿತು. ಕರ್ನಾಟಕದ ಬೌಲರ್ ಬಿ.ಆರ್. ರಿಹಾನ್ (107ಕ್ಕೆ4) ಅವರು ಉತ್ತಮ ದಾಳಿ ನಡೆಸಿದರು.
ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ ಕ್ರಿಕೆಟ್ ಸಂಸ್ಥೆಯು ಮಾನಸ್ (ಔಟಾಗದೇ 100; 137ಎ, 4X15, 6X1) ಮತ್ತು ಮಲಯ್ (78; 119ಎ, 4X10, 6X1) ಅವರ ಬ್ಯಾಟಿಂಗ್ನಿಂದ ತಂಡವು 90 ಓವರ್ಗಳಲ್ಲಿ 348 ರನ್ ಗಳಿಸಿತು. ಕರ್ನಾಟಕ ತಂಡದ ಬೌಲರ್ಗಳ ನಿರಂತರ ಶ್ರಮ ಮತ್ತು ತಾಳ್ಮೆಯಿಂದಾಗಿ ಆತಿಥೇಯ ತಂಡವನ್ನು ಆಲೌಟ್ ಮಾಡಲು ಸಾಧ್ಯವಾಯಿತು.
ಮೊದಲ ಇನಿಂಗ್ಸ್: ಗುಜರಾತ ಕ್ರಿಕೆಟ್ ಸಂಸ್ಥೆ: 90 ಓವರ್ಗಳಲ್ಲಿ 348 (ನಿಹಾಲ್ ಎಸ್ ಪಟೇಲ್ 22, ಮಲಯ್ ವಿ ಶಾ 78, ಮೌಲ್ಯರಾಜಸಿಂಹ ಚಾವಡಾ 41, ಮಾನಸ್ ಎಂ ದವೆ ಔಟಾಗದೇ 100, ಕಾವ್ಯ ಪಟೇಲ್ 43, ಈಸಾ ಹಕೀಮ್ ಪುತ್ತಿಗೆ 40ಕ್ಕೆ2, ಧ್ಯಾನ್ ಎಂ ಹಿರೇಮಠ 92ಕ್ಕೆ2, ಬಿ.ಆರ್. ರಿಹಾನ್ 107ಕ್ಕೆ4) ವಿರುದ್ಧ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.