ಮ್ಯಾಂಚೆಸ್ಟರ್: ಮಳೆರಾಯ ಕೃಪೆ ತೋರಿರುವ ಕಾರಣಭಾರತ ಮತ್ತು ನ್ಯೂಜಿಲೆಂಡ್ ತಂಡಗಳ ಬಾಕಿ ಆಟ ಇಂದು ಪುನಃ ಆರಂಭವಾಗುವ ನಿರೀಕ್ಷೆಯಿದೆ. ಬುಧವಾರ ಮುಂಜಾನೆ ಮ್ಯಾಂಚೆಸ್ಟರ್ನಲ್ಲಿ ಆಗಸ ಶುಭ್ರವಾಗಿದೆ, ಅಲ್ಲಲ್ಲಿ ಮೋಡಗಳು ತೇಲುತ್ತಿವೆ. ಅದರೆ ದಟ್ಟೈಸಿಲ್ಲ ಎಂದು ಕ್ರಿಕೆಟ್ ಅಭಿಮಾನಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ:ಮಳೆಯಿಂದಾಗಿ ಅರ್ಧ ನಡೆದ ಪಂದ್ಯಇಂದು ಮುಂದುವರಿಯಲಿದೆ
ಅಕ್ಯುವೆದರ್ ಸೇರಿದಂತೆ ಹವಾಮಾನ ಮುನ್ಸೂಚನೆ ನೀಡುವ ಹಲವು ವೆಬ್ಸೈಟ್ಗಳಲ್ಲಿ ಇದೇ ಮಾಹಿತಿ ಕಾಣಿಸುತ್ತಿದೆ.ಬುಧವಾರ ರಾತ್ರಿ ಭಾರಿ ಮಳೆ ಸುರಿಯಬಹುದು ಎನ್ನುವ ಹವಾಮಾನ ಮುನ್ಸೂಚನೆಯನ್ನು ಕೆಲ ವೆಬ್ಸೈಟ್ಗಳು ನೀಡಿವೆ.
ಈವರೆಗೆ ಮಳೆ ಆರಂಭವಾಗಿಲ್ಲ. ಹೀಗಾಗಿ ನಿಗದಿತ ಸಮಯಕ್ಕೆ ಪಂದ್ಯಗಳು ಆರಂಭವಾಗಬಹುದು. ಭಾರತ ತಂಡದ ಮಾಜಿ ಆಟಗಾರ ಸುನಿಲ್ ಗವಾಸ್ಕರ್ ಮಳೆ ಎದುರಿಸಲು ಐಸಿಸಿ ಸಿದ್ಧತೆ ಮಾಡಿಕೊಂಡಿಲ್ಲ ಎಂದು ಹರಿಹಾಯ್ದಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.
ಇನ್ನಷ್ಟು...
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.