ಚಿತ್ರಗಳಲ್ಲಿ: ಸಿಡ್ನಿಯಲ್ಲಿ ಮರುಕಳಿಸಿದ ಜನಾಂಗೀಯ ನಿಂದನೆ ಎಪಿಸೋಡ್
ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಪ್ರೇಕ್ಷಕ ಗ್ಯಾಲರಿಯಿಂದ ಭಾರತೀಯ ಆಟಗಾರರ ವಿರುದ್ಧ ಜನಾಂಗೀಯ ನಿಂದನೆ ಎದುರಾಗಿದೆ. ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಬಿಸಿಸಿಐ ಅಧಿಕೃತ ದೂರನ್ನು ಸಲ್ಲಿಸಿದೆ. ನಾಲ್ಕನೇ ದಿನದಾಟದಲ್ಲೂ ಮೊಹಮ್ಮದ್ ಸಿರಾಜ್ ವಿರುದ್ಧ ಜನಾಂಗೀಯ ನಿಂದನೆ ಪ್ರಸಂಗ ಎದುರಾಗಿತ್ತು. ಬಳಿಕ ನಾಯಕ ಅಜಿಂಕ್ಯ ರಹಾನೆ ಮುಖಾಂತರ ಅಂಪೈರ್ಗೆ ದೂರು ಸಲ್ಲಿಸಲಾಯಿತು. ತದಾ ನಂತರ ಭದ್ರತಾ ಸಿಬ್ಬಂದಿಗಳ ಸಹಾಯದೊಂದಿಗೆ ಆಪಾದಿತ ಆರು ಪ್ರೇಕ್ಷಕರನ್ನು ಗ್ಯಾಲರಿಯಿಂದ ಹೊರಹಾಕಲಾಯಿತು. ಚಿತ್ರ ಕೃಪೆ (ಎಎಫ್ಬಿ)
ಪ್ರಜಾವಾಣಿ ವಾರ್ತೆ
Published 10 ಜನವರಿ 2021, 10:53 IST
Last Updated 10 ಜನವರಿ 2021, 10:53 IST
ಮೊಹಮ್ಮದ್ ಸಿರಾಜ್ ವಿರುದ್ಧ ಜನಾಂಗೀಯ ನಿಂದನೆ
ಅಂಪೈರ್ಗೆ ದೂರು ನೀಡುತ್ತಿರುವ ಅಜಿಂಕ್ಯ ರಹಾನೆ
ಮೂರನೇ ದಿನದಾಟದಲ್ಲೂ ಸಿರಾಜ್ ವಿರುದ್ಧ ಜನಾಂಗೀಯ ನಿಂದನೆ ಎದುರಾಗಿತ್ತು.
ಆಪಾದಿತ ಪ್ರೇಕ್ಷಕರನ್ನು ಗ್ಯಾಲರಿಯಿಂದ ಹೊರಹಾಕುತ್ತಿರುವ ಭದ್ರತಾ ಸಿಬ್ಬಂದಿಗಳು
ಆಸೀಸ್ ಅಭಿಮಾನಿಗಳ ಗುಂಪಿನಿಂದ ಭಾರತೀಯ ಮನೋಬಲ ಕುಗ್ಗಿಸುವ ಪ್ರಯತ್ನ
ಸಹ ಆಟಗಾರರ ಬೆಂಬಲಕ್ಕೆ ನಿಂತ ನಾಯಕ ಅಜಿಂಕ್ಯ ರಹಾನೆ
ಪಾನಮತ್ತರಾದ ಪ್ರೇಕ್ಷಕರಿಂದ ಅಸಭ್ಯ ವರ್ತನೆ
ಜಸ್ಪ್ರೀತ್ ಬೂಮ್ರಾ ವಿರುದ್ಧವೂ ಜನಾಂಗೀಯ ನಿಂದನೆ ನಡೆದಿದೆ
ಭಾರತ ಕ್ರಿಕೆಟ್ ತಂಡದ ಕ್ಷಮೆ ಕೋರಿದ ಕ್ರಿಕೆಟ್ ಆಸ್ಟ್ರೇಲಿಯಾ