ಮೊದಲ ದಿನದ ಹರಾಜಿನಲ್ಲಿ ಕರ್ನಾಟಕದ ಆಟಗಾರನನ್ನು ಆಯ್ಕೆ ಮಾಡದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಟೀಕೆಗೆ ಗುರಿಯಾಗಿತ್ತು.
ಎರಡನೇ ದಿನದ ಪ್ರಕ್ರಿಯೆಯಯಲ್ಲಿ ಕನ್ನಡಿಗ ಅನೀಶ್ವರ್ ಗೌತಮ್ ಅವರನ್ನು ಮೂಲಬೆಲೆ 20 ಲಕ್ಷ ರೂಪಾಯಿ ನೀಡಿ ಖರೀದಿಸಿತು.
ಉಳಿದಂತೆ ದೇಶಿ ಕ್ರಿಕೆಟಿಗರು, ಯುವ ಆಟಗಾರರ ಮೇಲೆ ಹೆಚ್ಚು ಹಣ ವಿನಿಯೋಗಿಸಿತು.
ವಿಂಡೀಸ್ನ ಶರ್ಪೇನ್ ರುದರ್ಫೋರ್ಡ್ ಅವರಿಗೆ ಒಂದು ಕೋಟಿ ಕೊಟ್ಟು ಖರೀದಿಸಿತು. ಬೌಲರ್ ಸಿದ್ಧಾರ್ಥ್ ಕೌಲ್ ಅವರಿಗೆ 75 ಲಕ್ಷ ನೀಡಿದೆ.
ಮೊದಲ ದಿನ ದಿನೇಶ್ ಕಾರ್ತಿಕ್ ಫಫ್ ಡುಪ್ಲೆಸಿ ಮತ್ತು ಜೋಶ್ ಹ್ಯಾಜಲ್ವುಡ್ ಅವರನ್ನು ಸೇರ್ಪಡೆ ಮಾಡಿಕೊಂಡಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.