ADVERTISEMENT

IPL 2020| ಇದಿನ್ನೂ ಎರಡನೇ ಪಂದ್ಯ: ಯಜುವೇಂದ್ರ ಚಾಹಾಲ್‌

ಏಜೆನ್ಸೀಸ್
Published 25 ಸೆಪ್ಟೆಂಬರ್ 2020, 2:18 IST
Last Updated 25 ಸೆಪ್ಟೆಂಬರ್ 2020, 2:18 IST
ಯಜುವೇಂದ್ರ ಚಾಹಾಲ್‌
ಯಜುವೇಂದ್ರ ಚಾಹಾಲ್‌    

ದುಬೈ: ಕಿಂಗ್ಸ್‌ ಇಲೆವೆನ್‌ ಪಂಜಾಬ್‌ ವಿರುದ್ಧದ ಸೋಲಿನ ನಂತರ ಮಾತನಾಡಿರುವ ರಾಯಲ್‌ ಚಾಲೆಂಜರ್‌ ತಂಡದ ಸ್ಪಿನ್ನರ್‌ ಯಜುವೇಂದ್ರ ಚಾಹಾಲ್‌, ‘ಇದಿನ್ನು ಎರಡನೇ ಪಂದ್ಯ,’ ಎಂದು ಹೇಳಿದ್ದಾರೆ.

ಪಂದ್ಯದ ಬಳಿಕೆ ಮಾಧ್ಯಮಗಳೊಂದಿಗೆ ‌ಅವರು ಮಾತನಾಡಿದರು. ‘ ಇದಿನ್ನು ಎರಡನೇ ಪಂದ್ಯ. ತೀಕ್ಷ್ಣ ಬೌಲಿಂಗ್‌ ದಾಳಿಯಿಂದಾಗಿ ನಾವು ಮೊದಲ ಪಂದ್ಯವನ್ನು ಗೆದ್ದಿದ್ದೆವು. ಈ ಬಾರಿ ಕೆ ಎಲ್‌ ರಾಹುಲ್‌ ಅತ್ಯುತ್ತಮವಾಗಿ ಆಡಿದರು,’ ಎಂದು ಚಹಾಲ್‌ ಹೇಳಿದರು.

ಗುರುವಾರದ ಪಂದ್ಯದಲ್ಲಿ ಆರ್‌ಸಿಬಿ ವಿರುದ್ಧ ಉತ್ತಮವಾಗಿ ಆಡುತ್ತಿದ್ದ ಕಿಂಗ್ಸ್‌ ಇಲೆವೆನ್‌ ಪಂಜಾಬ್‌ನ ಆರಂಭಿಕರ ಜೊತೆಯಾಟವನ್ನು ಮೊದಲಿಗೆ ಮುರಿದಿದ್ದು ಯಜುವೇಂದ್ರ ಚಾಹಲ್‌. ಮಯಂಕ್ ಅಗರವಾಲ್ (25; 20ಎ, 4ಬೌಂ) ಅವರ ವಿಕೆಟ್‌ ಕಿತ್ತು ಆಟಕ್ಕೆ ಅವರು ತಿರುವು ನೀಡಿದ್ದರು. ಆದರೆ, ರಾಹುಲ್‌ ಆಟದ ಮುಂದೆ ಬೇರೆಲ್ಲವೂ ಮರೆಯಾದವು.

ADVERTISEMENT

ಅಂತಿಮವಾಗಿ ಪಂಜಾಬ್‌ ತಂಡ ಮೂರು ವಿಕೆಟ್‌ ನಷ್ಟದೊಂದಿಗೆ 206ರನ್‌ ಗಳಿಸಿತ್ತು. ಇದನ್ನು ಬೆನ್ನು ಹತ್ತಿದ ರಾಯಲ್‌ ಚಾಲೆಂಜರ್‌ ತಂಡ 17 ಓವರ್‌ಗಳಲ್ಲಿ ಕೇವಲ 109 ರನ್‌ ಗಳಿಗೆ ಸರ್ವಪತನ ಕಂಡು, ಪಂದ್ಯದಲ್ಲಿ ಹೀನಾಯವಾಗಿ ಸೋಲು ಅನುಭವಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.