ಬೆಂಗಳೂರು: ಇದೇ ತಿಂಗಳ 29ರಿಂದ ಫೆಬ್ರುವರಿ 1ರವರೆಗೆ ಮೈಸೂರಿನಲ್ಲಿ ನಡೆಯುವ ಉತ್ತರ ಪ್ರದೇಶ ಎದುರಿನ ಸಿ.ಕೆ.ನಾಯ್ಡು ಟ್ರೋಫಿ ಪಂದ್ಯಕ್ಕೆ ಶುಕ್ರವಾರ ಕರ್ನಾಟಕದ 23 ವರ್ಷದೊಳಗಿನವರ ಪುರುಷರ ಕ್ರಿಕೆಟ್ ತಂಡವನ್ನು ಪ್ರಕಟಿಸಲಾಗಿದೆ. ಕಿಶನ್ ಎಸ್.ಬೆಡಾರೆ ಅವರು ತಂಡದ ಸಾರಥ್ಯ ವಹಿಸಲಿದ್ದಾರೆ.
ತಂಡ ಇಂತಿದೆ: ಕಿಶನ್ ಎಸ್.ಬೆಡಾರೆ (ನಾಯಕ), ಲವನಿತ್ ಸಿಸೋಡಿಯಾ (ಉಪ ನಾಯಕ/ ವಿಕೆಟ್ ಕೀಪರ್), ಮನೋಜ್ ಭಾಂಡಾಗೆ, ಜಯೇಶ್ ಬಾಬು, ಬಿ.ಯು.ಶಿವಕುಮಾರ್, ಶ್ರೀಕರ, ಸುಜಯ್ ಸತೇರಿ (ವಿಕೆಟ್ ಕೀಪರ್), ವಿ.ವೈಶಾಖ್, ಅಭಿಲಾಷ್ ಶೆಟ್ಟಿ, ಸಂತೋಕ್ ಸಿಂಗ್, ಕುಶಾಲ್ ವಧ್ವಾನಿ, ಅಭೀತ್ ಕುಟಪಾಡಿ, ತುಷಾರ್ ಹರಿಕೃಷ್ಣ, ಸುಜೀತ್ ಗೌಡ ಮತ್ತು ರಿಷಿ ಬೋಪಣ್ಣ. ಕೋಚ್: ಎನ್.ಸಿ.ಅಯ್ಯಪ್ಪ ಮತ್ತು ದೀಪಕ್ ಎ.ಚೌಗುಲೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.