ADVERTISEMENT

ಏಕದಿನ ಕ್ರಿಕೆಟ್‌ ಲೀಗ್‌: ರಾಜ್ಯ ತಂಡಕ್ಕೆ ವೃಂದಾ ದಿನೇಶ್ ನಾಯಕಿ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2019, 16:30 IST
Last Updated 8 ಫೆಬ್ರುವರಿ 2019, 16:30 IST

ಬೆಂಗಳೂರು: ವೃಂದಾ ದಿನೇಶ್‌ ಅವರು ಫೆಬ್ರುವರಿ 10ರಿಂದ ಮಾರ್ಚ್‌ ಒಂದರವರೆಗೆ ಅಸ್ಸಾಂನಲ್ಲಿ ನಡೆಯುವ ಅಂತರ ರಾಜ್ಯ 19 ವರ್ಷದೊಳಗಿನವರ ಏಕದಿನ ಕ್ರಿಕೆಟ್‌ ಲೀಗ್‌ನಲ್ಲಿ ಕರ್ನಾಟಕ ತಂಡವನ್ನು ಮುನ್ನಡೆಸಲಿದ್ದಾರೆ.

ಈ ಟೂರ್ನಿಗೆ ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ (ಕೆಎಸ್‌ಸಿಎ) ಶುಕ್ರವಾರ 15 ಸದಸ್ಯರ ತಂಡವನ್ನು ಪ್ರಕಟಿಸಿದೆ. ಶಿವಮೊಗ್ಗದ ಅದಿತಿ ರಾಜೇಶ್‌ಗೆ ಉಪ ನಾಯಕಿಯ ಜವಾಬ್ದಾರಿ ನೀಡಲಾಗಿದೆ.

ತಂಡ ಇಂತಿದೆ: ವೃಂದಾ ದಿನೇಶ್‌ (ನಾಯಕಿ), ಅದಿತಿ ರಾಜೇಶ್‌ (ಉಪ ನಾಯಕಿ), ಶ್ರೇಯಾಂಕ ಆರ್‌.ಪಾಟೀಲ, ಟಿ.ನೇತ್ರಾವತಿ (ವಿಕೆಟ್‌ ಕೀಪರ್‌), ನಿಕ್ಕಿ ಪ್ರಸಾದ್‌, ಸ್ನೇಹಾ ಜಗದೀಶ್‌, ಅನಘಾ ಮುರಳಿ, ಚಾಂದಸಿ ಕೃಷ್ಣಮೂರ್ತಿ, ಕೃಷಿಕಾ ರೆಡ್ಡಿ, ರೋಷನಿ ಕಿರಣ್‌, ಶುಭಶ್ರೀ ನಾಯ್ಡು, ಚಾಹೆಲ್‌ ಚೋಪ್ರಾ, ಸಂಜನಾ ರಾಜ್‌, ರಕ್ಷಿತಾ ನಾಯಕ್‌ ಮತ್ತು ಹೇಮಾಂಜಲಿ ಜಗದಾಳೆ.

ADVERTISEMENT

ಕೋಚ್‌: ಮಾಲಾ ಸುಂದರೇಶನ್‌, ಸಹಾಯಕ ಕೋಚ್‌: ಲಕ್ಷ್ಮಿ ಹರಿಹರನ್‌. ಫಿಸಿಯೊ: ಶಿಶಿರಾ, ಟ್ರೈನರ್‌: ಬಿ.ಪ್ರೀತಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.