ADVERTISEMENT

ವಿರಾಟ್ ಕೊಹ್ಲಿಗೆ ಅಮೂಲ್ಯ ಸಲಹೆ ಕೊಟ್ಟ ಯುವರಾಜ್ ಸಿಂಗ್

ಐಎಎನ್ಎಸ್
Published 28 ಏಪ್ರಿಲ್ 2022, 13:42 IST
Last Updated 28 ಏಪ್ರಿಲ್ 2022, 13:42 IST
ವಿರಾಟ್ ಕೊಹ್ಲಿ
ವಿರಾಟ್ ಕೊಹ್ಲಿ   

ಮುಂಬೈ: ಸತತ ಬ್ಯಾಟಿಂಗ್ ವೈಫಲ್ಯದಿಂದ ಬಳಲುತ್ತಿರುವ ವಿರಾಟ್ ಕೊಹ್ಲಿ ಅವರಿಗೆ ಮಾಜಿ ಆಲ್‌ರೌಂಡರ್ ಯುವರಾಜ್ ಸಿಂಗ್ ಅಮೂಲ್ಯ ಸಲಹೆ ನೀಡಿದ್ದಾರೆ.

ವಿರಾಟ್ ಕೊಹ್ಲಿ ಮತ್ತೊಮ್ಮೆ ಮುಕ್ತ ವ್ಯಕ್ತಿತ್ವವನ್ನು ಮೈಗೂಡಿಸಬೇಕಿದೆ. ಅವರು ತಮ್ಮನ್ನು ತಾನೇ ಬದಲಾಯಿಸಿಕೊಂಡರೆ ಹಾಗೂ ಮೊದಲಿನಂತೆಯೇ ಇರಲು ಸಾಧ್ಯವಾದರೆ ಆಟದಲ್ಲೂ ಪ್ರತಿಫಲಿಸಲಿದೆ ಎಂದು ಹೇಳಿದ್ದಾರೆ.

ಈ ಯುಗದ ಅತ್ಯುತ್ತಮ ಆಟಗಾರ ಎಂಬುದನ್ನು ವಿರಾಟ್ ಕೊಹ್ಲಿ ಸಾಬೀತು ಮಾಡಿದ್ದಾರೆ. ಅಲ್ಲದೆ ಕಠಿಣ ಪರಿಶ್ರಮದಲ್ಲಿ ವಿಶ್ವಾಸವನ್ನಿರಿಸಿಕೊಂಡಿದ್ದಾರೆ. ಇದರಿಂದ ಕಳೆದ ಹಲವಾರು ವರ್ಷಗಳಲ್ಲಿ ಯಶಸ್ಸು ಗಳಿಸಲು ಸಾಧ್ಯವಾಗಿದೆ ಎಂದು ಯುವಿ ಉಲ್ಲೇಖಿಸಿದರು.

ವಿರಾಟ್ ರನ್ ಹೊಳೆಯನ್ನೇ ಹರಿಸುವುದನ್ನು ನಾವು ನೋಡಿದ್ದೇವೆ. ಆದರೆ ಎಲ್ಲ ಶ್ರೇಷ್ಠ ಆಟಗಾರರಂತೆಯೇ ಕಠಿಣ ಪರಿಸ್ಥಿತಿಯಿಂದ ಹಾದು ಹೋಗುತ್ತಿದ್ದಾರೆ. ಇದು ವಿರಾಟ್ ಹಾಗೂ ಅಭಿಮಾನಿಗಳಲ್ಲೂ ಬೇಸರ ಮೂಡಿಸಿದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.