ADVERTISEMENT

ದೇವಿಗೆ ಧೋನಿ ಪೂಜೆ: ಕ್ರಿಕೆಟ್‌ಗೆ ವಾಪಸ್‌?

​ಪ್ರಜಾವಾಣಿ ವಾರ್ತೆ
Published 22 ಜನವರಿ 2020, 20:15 IST
Last Updated 22 ಜನವರಿ 2020, 20:15 IST
ಪೂಜೆ ಸಲ್ಲಿಸುತ್ತಿರುವ ಮಹೇಂದ್ರಸಿಂಗ್ ಧೋನಿ
ಪೂಜೆ ಸಲ್ಲಿಸುತ್ತಿರುವ ಮಹೇಂದ್ರಸಿಂಗ್ ಧೋನಿ   

ರಾಂಚಿ: ಮಹೇಂದ್ರಸಿಂಗ್ ಧೋನಿ ಈಗ ಏನು ಮಾಡಿದರೂ ಸುದ್ದಿ. ಅವರ ಪ್ರತಿಯೊಂದು ಕಾರ್ಯಕ್ಕೂ ಈಗ ಕ್ರಿಕೆಟ್‌ನಿಂದ ನಿವೃತ್ತಿ ಅಥವಾ ಮರಳುವಿಕೆಯ ವಿಷಯಗಳಿಗೆ ತಳಕು ಹಾಕಲಾಗುತ್ತಿದೆ.

ರಾಂಚಿ ಸಮೀಪದ ದಿಯೊರಾ ಮಾತಾ ಮಂದಿರದಲ್ಲಿ ಸೋಮವಾರ ಪೂಜೆ ಸಲ್ಲಿಸಿದ್ದು ಕೂಡ ಚರ್ಚೆಗೆ ನಾಂದಿ ಹಾಡಿದೆ.

ಅಭಿಮಾನಿ ಬಳಗವೊಂದು ಸಾಮಾಜಿಕ ಜಾಲತಾಣದಲ್ಲಿ ಪೂಜೆಯ ಚಿತ್ರಗಳನ್ನು ಹಾಕಿ, ಐಪಿಎಲ್ ಟೂರ್ನಿಗೆ ಮರಳಲು ಇದು ಮುನ್ನುಡಿ ಎಂದು ಬರೆದುಕೊಂಡಿದೆ. ಕೆಲವರು ಐಪಿಎಲ್ ಮಾತ್ರವಲ್ಲ, ಭಾರತ ತಂಡಕ್ಕೂ ಮರ ಳಲಿದ್ದಾರೆ ಎಂದಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.