ADVERTISEMENT

’ದೇಶಿ ಕ್ರಿಕೆಟ್‌ ರಾಜ‘ ರಣಜಿ ಟೂರ್ನಿ ಇಲ್ಲ: 87 ವರ್ಷಗಳ ಬಳಿಕ ಇದೇ ಮೊದಲು

​ಪ್ರಜಾವಾಣಿ ವಾರ್ತೆ
Published 30 ಜನವರಿ 2021, 15:18 IST
Last Updated 30 ಜನವರಿ 2021, 15:18 IST
ಬಿಸಿಸಿಐ
ಬಿಸಿಸಿಐ   

ಮುಂಬೈ: 87 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ರಣಜಿ ಕ್ರಿಕೆಟ್‌ ಟೂರ್ನಿ ರದ್ದುಪಡಿಸಿರುವುದಾಗಿ ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ(ಬಿಸಿಸಿಐ) ತಿಳಿಸಿದೆ.

ವಿಜಯ್ ಹಜಾರೆ ಟ್ರೋಫಿಯನ್ನು ನಡೆಸಲು ಎಲ್ಲ ರಾಜ್ಯಗಳ ಕ್ರಿಕೆಟ್‌ ಮಂಡಳಿಗಳು ಒಲವು ತೋರಿಸಿವೆ. ಜತೆಗೆ, ಕೊರೊನಾ ಹರಡುವಿಕೆ ಗಮನದಲ್ಲಿಟ್ಟುಕೊಂಡು ಪ್ರಸಕ್ತ ವರ್ಷದ ರಣಜಿ ಟೂರ್ನಿಯನ್ನು ನಡೆಸದಿರಲು ತೀರ್ಮಾನಿಸಲಾಗಿದೆ ಎಂದು ಮೂಲಗಳು ಹೇಳಿವೆ.

ಹತ್ತೊಂಬತ್ತು ವರ್ಷದೊಳಗಿನವರ (U-19) ಏಕದಿನ ಕ್ರಿಕೆಟ್‌ ಟೂರ್ನಿ, ಮಹಿಳೆಯರ ಏಕದಿನ ಕ್ರಿಕೆಟ್‌ ಟೂರ್ನಿಗಳನ್ನು ಆಯೋಜಿಸುವ ಕುರಿತು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ, ರಾಜ್ಯಗಳಿಗೆ ಪತ್ರ ಬರೆದಿದ್ದಾರೆ.

ADVERTISEMENT

ಫೆಬ್ರುವರಿ 5ರಿಂದ ಭಾರತ–ಇಂಗ್ಲೆಂಡ್‌ ಕ್ರಿಕೆಟ್‌ ಸರಣಿ ಆರಂಭವಾಗಿದೆ. ಈ ತಂಡಗಳು 4 ಟೆಸ್ಟ್‌, 3 ಏಕದಿನ, 5 ಟಿ–20 ಪಂದ್ಯಗಳನ್ನು ಆಡಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.