ADVERTISEMENT

ಧೋನಿ ಸ್ಥಾನದಲ್ಲಿ ವಿಕೆಟ್ ಕೀಪಿಂಗ್ ಮಾಡುವುದು ಒತ್ತಡದ ಕೆಲಸ: ಕೆ.ಎಲ್. ರಾಹುಲ್

ಪ್ರೇಕ್ಷಕರು ಅಪಾರ ನಿರೀಕ್ಷೆ ಇರಿಸಿಕೊಂಡು ಪಂದ್ಯಗಳನ್ನು ವೀಕ್ಷಿಸುತ್ತಾರೆ

ಪಿಟಿಐ
Published 28 ಏಪ್ರಿಲ್ 2020, 3:03 IST
Last Updated 28 ಏಪ್ರಿಲ್ 2020, 3:03 IST
ಕೆ.ಎಲ್.ರಾಹುಲ್ –ಪಿಟಿಐ ಚಿತ್ರ
ಕೆ.ಎಲ್.ರಾಹುಲ್ –ಪಿಟಿಐ ಚಿತ್ರ   

ಮುಂಬೈ: ಮಹೇಂದ್ರ ಸಿಂಗ್ ಧೋನಿ ಸ್ಥಾನದಲ್ಲಿ ವಿಕೆಟ್ ಕೀಪಿಂಗ್ ಮಾಡುವಾಗ ಒತ್ತಡ ಇರುತ್ತದೆ ಎಂದು ಭಾರತ ತಂಡದ ಆರಂಭಿಕ ಬ್ಯಾಟ್ಸ್‌ಮನ್ ಮತ್ತು ವಿಕೆಟ್ ಕೀಪರ್ ಕೆ.ಎಲ್‌.ರಾಹುಲ್ ಅಭಿಪ್ರಾಯಪಟ್ಟಿದ್ದಾರೆ.

‘ಪಂದ್ಯ ವೀಕ್ಷಿಸುವಾಗ ಪ್ರೇಕ್ಷಕರು ಅಪಾರ ನಿರೀಕ್ಷೆ ಇರಿಸಿಕೊಂಡಿರುತ್ತಾರೆ. ಧೋನಿಯಂತೆಯೇ ಕೀಪಿಂಗ್ ಮಾಡಬೇಕೆಂಬ ಬಯಕೆ ಅವರಲ್ಲಿರುತ್ತದೆ. ಇದು ಒತ್ತಡಕ್ಕೆ ಕಾರಣ. ಹಾಗೆಂದು ಯಾಮಾರಿದರೆ ಧೋನಿಗೆ ಯಾರೂ ಸಾಟಿ ಇಲ್ಲ ಎಂದು ಪ್ರೇಕ್ಷಕರು ನಿರ್ಧರಿಸುತ್ತಾರೆ. ಅಂತರರಾಷ್ಟ್ರೀಯ ಕ್ರಿಕೆಟ್‌ ನಲ್ಲಿ ಧೋನಿ ಮೂಡಿಸಿರುವ ಛಾಪು ಇದಕ್ಕೆ ಕಾರಣ’ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT