ಕೋಲ್ಕತ್ತ: ಪ್ರಸಕ್ತ ಋತುವಿನ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಆಡಲಿರುವ ಬಂಗಾಳ ತಂಡಕ್ಕೆ ಅಭಿಮನ್ಯು ಈಶ್ವರನ್ ಅವರನ್ನು ನಾಯಕರನ್ನಾಗಿ ಆಯ್ಕೆ ಮಾಡಲಾಗಿದೆ. ಭಾರತ ತಂಡದ ವೇಗದ ಬೌಲರ್ ಮೊಹಮ್ಮದ್ ಶಮಿ ಹಾಗೂ ಆಕಾಶ್ ದೀಪ್ ತಂಡದಲ್ಲಿದ್ದಾರೆ.
ಇದೇ 15ರಿಂದ ಟೂರ್ನಿಯು ಆರಂಭವಾಗಲಿದೆ. ಬಂಗಾಳ ಕ್ರಿಕೆಟ್ ಸಂಸ್ಥೆ (ಸಿಎಬಿ) ಬುಧವಾರ ತಂಡವನ್ನು ಆಯ್ಕೆ ಮಾಡಿದೆ. ಬಂಗಾಳ ತಂಡವು ಸಿ ಗುಂಪಿನಲ್ಲಿ ಕಣಕ್ಕಿಳಿಯಲಿದೆ. ಇದೇ ಗುಂಪಿನಲ್ಲಿ ಗುಜರಾತ್, ಹರಿಯಾಣ, ಸರ್ವಿಸಸ್, ರೈಲ್ವೆಸ್, ತ್ರಿಪುರ, ಉತ್ತರಾಖಂಡ ಮತ್ತು ಅಸ್ಸಾಂ ತಂಡಗಳೂ ಇವೆ.
ತಂಡ ಇಂತಿದೆ: ಅಭಿಮನ್ಯು ಈಶ್ವರನ್ (ನಾಯಕ), ಅಭಿಷೇಕ್ ಪೊರೆಲ್ (ಉಪನಾಯಕ/ವಿಕೆಟ್ಕೀಪರ್), ಸುದೀಪ್ ಕುಮಾರ್ ಘರಮಿ, ಅನುಸ್ಟುಪ್ ಮಜುಂದಾರ್, ಸುದೀಪ್ ಚಟರ್ಜಿ, ಸುಮಂತ್ ಗುಪ್ತಾ, ಸೌರಭ್ ಕುಮಾರ್ ಸಿಂಗ್, ವಿಶಾಲ್ ಭಾಟಿ, ಮೊಹಮ್ಮದ್ ಶಮಿ, ಆಕಾಶ್ ದೀಪ್, ಸೂರಜ್ ಸಿಂಧು ಜೈಸ್ವಾಲ್, ಶಾಕೀರ್ ಹಬೀಬ್ ಗಾಂಧಿ (ವಿಕೆಟ್ಕೀಪರ್), ಇಶಾನ್ ಪೊರೆಲ್, ಖಾಜಿ ಜುನೈದ್ ಸೈಫಿ, ರಾಹುಲ್ ಪ್ರಸಾದ್, ಸುಮಿತ್ ಮೊಹಾಂತಾ, ವಿಕಾಶ್ ಸಿಂಗ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.