ADVERTISEMENT

Vijay Hazare Trophy| ಮಿಂಚಿದ ಬ್ಯಾಟರ್‌ಗಳು: ಕರ್ನಾಟಕಕ್ಕೆ ಹ್ಯಾಟ್ರಿಕ್ ಗೆಲುವು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 29 ಡಿಸೆಂಬರ್ 2025, 13:10 IST
Last Updated 29 ಡಿಸೆಂಬರ್ 2025, 13:10 IST
   

ಅಹಮದಾಬಾದ್: ವಿಜಯ್‌ ಹಜಾರೆ ಟ್ರೋಫಿ ಟೂರ್ನಿಯಲ್ಲಿ ತಮಿಳುನಾಡು ವಿರುದ್ಧದ ಪಂದ್ಯದಲ್ಲಿ ಕರ್ನಾಟಕ ತಂಡವು 4 ವಿಕೆಟ್‌ಗಳ ರೋಚಕ ಗೆಲುವು ದಾಖಲಿಸಿದೆ.

ಗುಜರಾತ್‌ ಕಾಲೇಜ್‌ ಗ್ರೌಂಡ್‌ನಲ್ಲಿ ನಡೆದ ಪಂದ್ಯದಲ್ಲಿ ಟಾಸ್‌ ಗೆದ್ದ ಕರ್ನಾಟಕ ತಂಡವು ಮೊದಲು ಫೀಲ್ಡಿಂಗ್ ಆಯ್ದುಕೊಂಡಿತ್ತು.

ಮೊದಲು ಬ್ಯಾಟಿಂಗ್ ಮಾಡಿದ ತಮಿಳುನಾಡು ತಂಡದ ಪರ ನಾಯಕ ಎನ್. ಜಗದೀಶನ್(65 ರನ್) ಹಾಗೂ ಪ್ರದೋಶ್ ಪಾಲ್(57 ರನ್) ಅರ್ಧಶತಕ ಬಾರಿಸಿದರು. ತಂಡವು 49.5 ಓವರ್‌ಗಳಲ್ಲಿ 288 ರನ್‌ಗಳಿಗೆ ಆಲೌಟ್‌ ಆಗಿತ್ತು.

ADVERTISEMENT

ಕರ್ನಾಟಕ ಪರ ಅಭಿಲಾಶ್ ಶೆಟ್ಟಿ 4 ವಿಕೆಟ್, ವಿದ್ಯಾದರ್ ಪಾಟೀಲ್ ಹಾಗೂ ಶ್ರೀಶಾ ಆಚಾರ್ ತಲಾ 2 ವಿಕೆಟ್‌ ಪಡೆದು ಮಿಂಚಿದರು.

289 ರನ್‌ ಗುರಿ ಬೆನ್ನಟ್ಟಿದ ಕರ್ನಾಟಕ ತಂಡವು ಉತ್ತಮ ಲಯದಲ್ಲಿದ್ದ ಆರಂಭಿಕ ಆಟಗಾರ ದೇವದತ್ತ ಪಡೀಕ್ಕಲ್(22 ರನ್) ಅವರ ವಿಕೆಟ್‌ ಅನ್ನು ಬೇಗನೇ ಕಳೆದುಕೊಂಡಿತು.

ನಾಯಕ ಮಯಂಕ್ ಅಗರವಾಲ್(58 ರನ್), ವಿಕೆಟ್ ಕೀಪರ್ ಬ್ಯಾಟರ್ ಕೃಷ್ಣನ್ ಶ್ರೀಜಿತ್ (77 ರನ್) ಹಾಗೂ ಶ್ರೇಯಸ್‌ ಗೋಪಾಲ್ (55 ರನ್) ಅರ್ಧಶತಕದ ನೆರವಿನಿಂದ 47.1 ಓವರ್‌ಗಳಲ್ಲಿ 6 ವಿಕೆಟ್‌ ನಷ್ಟಕ್ಕೆ ಗುರಿ ತಲುಪಿತು.

ತಮಿಳುನಾಡು ವಿರುದ್ಧ 4 ವಿಕೆಟ್‌ ಗೆಲುವು ಸಾಧಿಸುವ ಮೂಲಕ ಕರ್ನಾಟಕ ತಂಡವು ಟೂರ್ನಿಯಲ್ಲಿ ಆಡಿರುವ ಮೂರು ಪಂದ್ಯಗಳಲ್ಲಿ ಗೆದ್ದು, ಟೂರ್ನಿಯಲ್ಲಿ ಅಜೇಯವಾಗಿ ಉಳಿದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.