ADVERTISEMENT

ಬಿಡಬ್ಲ್ಯುಎಫ್‌ ಫೈನಲ್ಸ್ ಬ್ಯಾಡ್ಮಿಂಟನ್‌ ಟೂರ್ನಿ: ಹಿಂದೆ ಸರಿದ ಸಿಂಧು

ಪಿಟಿಐ
Published 13 ನವೆಂಬರ್ 2022, 20:45 IST
Last Updated 13 ನವೆಂಬರ್ 2022, 20:45 IST
.
.   

ನವದೆಹಲಿ: ಭಾರತದ ಪಿ.ವಿ.ಸಿಂಧು ಅವರು ಬಿಡಬ್ಲ್ಯುಎಫ್‌ ವಿಶ್ವ ಟೂರ್ ಫೈನಲ್ಸ್ ಬ್ಯಾಡ್ಮಿಂಟನ್‌ ಟೂರ್ನಿಯಿಂದ ಹಿಂದೆ ಸರಿದಿದ್ದಾರೆ. ಪಾದದ ಗಾಯದಿಂದ ಇನ್ನೂ ಚೇತರಿಸಿಕೊಳ್ಳದಿರುವ ಕಾರಣ ಅವರು ಈ ನಿರ್ಧಾರ ತಳೆದಿದ್ದಾರೆ.

2018ರ ಆವೃತ್ತಿಯ ಚಾಂಪಿಯನ್ ಸಿಂಧು ಅವರು, ಆಗಸ್ಟ್‌ನಲ್ಲಿ ನಡೆದ ಕಾಮನ್‌ವೆಲ್ತ್‌ ಗೇಮ್ಸ್ ಸಂದರ್ಭದಲ್ಲಿ ಗಾಯಗೊಂಡಿದ್ದರು.

ಬಿಡಬ್ಲ್ಯುಎಫ್‌ ಫೈನಲ್ಸ್ ಚೀನಾದ ಗುವಾಂಗ್‌ಜುನಲ್ಲಿ ಡಿಸೆಂಬರ್ 14ರಿಂದ ನಡೆಯಲಿದೆ.

ADVERTISEMENT

ಸಿಂಧು ಹಿಂದೆ ಸರಿದಿರುವುದರಿಂದ ಎಚ್‌.ಎಸ್‌. ಪ್ರಣಯ್ ಅವರು ಒಬ್ಬರೇ ಭಾರತದ ಆಟಗಾರನಾಗಿ ಟೂರ್ನಿಯಲ್ಲಿ ಕಣಕ್ಕಿಳಿಯಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.