ADVERTISEMENT

ಇಂಡಿಯಾ ಓಪನ್ ಬ್ಯಾಡ್ಮಿಂಟನ್ | ಅಕ್ಸೆಲ್ಸನ್‌ಗೆ ಮಣಿದ ಶ್ರೀಕಾಂತ್‌

ಇಂಡಿಯಾ ಓಪನ್ ಬ್ಯಾಡ್ಮಿಂಟನ್ ಟೂರ್ನಿ

ಪಿಟಿಐ
Published 18 ಜನವರಿ 2023, 13:47 IST
Last Updated 18 ಜನವರಿ 2023, 13:47 IST
ವಿಕ್ಟರ್ ಅಕ್ಸೆಲ್ಸನ್‌ ಆಟದ ಶೈಲಿ– ಪಿಟಿಐ ಚಿತ್ರ
ವಿಕ್ಟರ್ ಅಕ್ಸೆಲ್ಸನ್‌ ಆಟದ ಶೈಲಿ– ಪಿಟಿಐ ಚಿತ್ರ   

ನವದೆಹಲಿ: ಭಾರತದ ಕಿದಂಬಿ ಶ್ರೀಕಾಂತ್‌ ಅವರು ಇಂಡಿಯಾ ಓಪನ್ ಬ್ಯಾಡ್ಮಿಂಟನ್ ಟೂರ್ನಿಯ ಮೊದಲ ಸುತ್ತಿನಲ್ಲೇ ಸೋಲನುಭವಿಸಿದರು.

ಇಲ್ಲಿ ನಡೆಯುತ್ತಿರುವ ಟೂರ್ನಿಯ ಪುರುಷರ ಸಿಂಗಲ್ಸ್ ವಿಭಾಗದ ಹಣಾಹಣಿಯಲ್ಲಿ ಶ್ರೀಕಾಂತ್‌ 14-21, 19-21ರಿಂದ ಡೆನ್ಮಾರ್ಕ್‌ನ, ವಿಶ್ವ ರ‍್ಯಾಂಕಿಂಗ್‌ನಲ್ಲಿ ಅಗ್ರಸ್ಥಾನದಲ್ಲಿರುವ ವಿಕ್ಟರ್ ಅಕ್ಸೆಲ್ಸನ್‌ ಎದುರು ಎಡವಿದರು.

ಮೊದಲು ಗೇಮ್‌ಅನ್ನು ಕೈಚೆಲ್ಲಿದ ಬಳಿಕ ಶ್ರೀಕಾಂತ್ ಎರಡನೇ ಗೇಮ್‌ನಲ್ಲಿ ಹೋರಾಟ ನಡೆಸಿದರು. ಒಂದು ಹಂತದಲ್ಲಿ 14–5ರಿಂದ ಮುನ್ನಡೆ ಸಾಧಿಸಿದ್ದರು. ಆದರೆ ಅದೇ ಲಯ ಮುಂದುವರಿಸುವಲ್ಲಿ ಅವರಿಗೆ ಸಾಧ್ಯವಾಗಲಿಲ್ಲ. ವಿಶ್ವದ ಮಾಜಿ ಅಗ್ರ ರ‍್ಯಾಂಕಿನ ಆಟಗಾರ ಶ್ರೀಕಾಂತ್, ರ‍್ಯಾಲಿಗಳಲ್ಲಿ ಆರಂಭದಲ್ಲಿ ಪಾರಮ್ಯ ಮೆರೆದರು. ಆದರೆ ತಪ್ಪುಗಳ ಹೆಚ್ಚಾಗುತ್ತ ಸಾಗಿದ್ದು ಅವರ ಸೋಲಿಗೆ ಕಾರಣವಾಯಿತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.