ADVERTISEMENT

ಜೂಡೊ: ಅಂಧ ವಿದ್ಯಾರ್ಥಿಗೆ ಕಂಚು

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2023, 13:15 IST
Last Updated 15 ಡಿಸೆಂಬರ್ 2023, 13:15 IST
ರಾಷ್ಟ್ರೀಯ ಮಟ್ಟದ ಜೂಡೊ ಚಾಂಪಿಯನ್‌ಷಿಪ್‌ನಲ್ಲಿ ಕಂಚಿನ ಪದಕ ಗೆದ್ದ ನೂರ್ ಅಬ್ಜಲ್‌ ಅವರನ್ನು ಆಚಾರ್ಯ ಪಾಠಶಾಲಾ ಎಜುಕೇಷನಲ್‌ ಟ್ರಸ್ಟ್‌ ಸಂಸ್ಥೆಯ ಅಧ್ಯಕ್ಷ ಡಾ.ವಿಷ್ಣು ಭರತ್‌ ಸನ್ಮಾನಿಸಿದರು
ರಾಷ್ಟ್ರೀಯ ಮಟ್ಟದ ಜೂಡೊ ಚಾಂಪಿಯನ್‌ಷಿಪ್‌ನಲ್ಲಿ ಕಂಚಿನ ಪದಕ ಗೆದ್ದ ನೂರ್ ಅಬ್ಜಲ್‌ ಅವರನ್ನು ಆಚಾರ್ಯ ಪಾಠಶಾಲಾ ಎಜುಕೇಷನಲ್‌ ಟ್ರಸ್ಟ್‌ ಸಂಸ್ಥೆಯ ಅಧ್ಯಕ್ಷ ಡಾ.ವಿಷ್ಣು ಭರತ್‌ ಸನ್ಮಾನಿಸಿದರು   

ಬೆಂಗಳೂರು: ಇಲ್ಲಿನ ಆಚಾರ್ಯ ಪಾಠಶಾಲಾ ಎಜುಕೇಷನಲ್‌ ಟ್ರಸ್ಟ್‌ ಸಂಸ್ಥೆಯ ದ್ವಿತೀಯ ಪಿಯುಸಿಯ ಅಂಧ ವಿದ್ಯಾರ್ಥಿ ನೂರ್ ಅಬ್ಜಲ್‌ ಅವರು ಪಂಜಾಬ್‌ನಲ್ಲಿ ಈಚೆಗೆ ನಡೆದ ರಾಷ್ಟ್ರೀಯ ಮಟ್ಟದ ಜೂಡೊ ಚಾಂಪಿಯನ್‌ಷಿಪ್‌ನಲ್ಲಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿ ಕಂಚಿನ ಪದಕ ಗೆದ್ದಿದ್ದಾರೆ.

ಇದೇ ಸಂಸ್ಥೆಯ ದ್ವಿತೀಯ ಬಿಕಾಂನ ಅಂಧ ವಿದ್ಯಾರ್ಥಿ ಆರ್‌.ಶಾಬಾಜ್ ಅಹಮ್ಮದ್‌ ಅವರೂ ರಾಷ್ಟ್ರೀಯ ಮಟ್ಟದ ಜೂಡೊ ಚಾಂಪಿಯನ್‌ಷಿಪ್‌ನಲ್ಲಿ ಭಾಗವಹಿಸಿದ್ದರು. ಅಲ್ಲದೆ, ಇವರಿಬ್ಬರು ಟಿಸಿಎಸ್‌ ವಿಶ್ವ 10ಕೆ ಓಟದಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT