ADVERTISEMENT

ಪಿಕೆಎಲ್‌: ಪವನ್‌ಗೆ ಜಾಕ್‌ಪಾಟ್ ನಿರೀಕ್ಷೆ: ಅನೂಪ್ ಕುಮಾರ್

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2022, 21:30 IST
Last Updated 1 ಆಗಸ್ಟ್ 2022, 21:30 IST
ಪವನ್ ಶೆರಾವತ್‌
ಪವನ್ ಶೆರಾವತ್‌   

ಬೆಂಗಳೂರು: ಪ್ರೊ ಕಬಡ್ಡಿ ಲೀಗ್‌ (ಪಿಕೆಎಲ್‌) ಟೂರ್ನಿಯ ಒಂಬತ್ತನೇ ಆವೃತ್ತಿಗೆ ಆಟಗಾರರ ಹರಾಜು ಪ್ರಕ್ರಿಯೆ ಇದೇ ಶುಕ್ರವಾರ ಮತ್ತು ಶನಿವಾರ ನಡೆಯಲಿದ್ದು ಪವನ್ ಕುಮಾರ್ ಶೆರಾವತ್ ಅವರಿಗೆ ಹೆಚ್ಚಿನ ಮೌಲ್ಯ ಲಭಿಸುವ ನಿರೀಕ್ಷೆಯಿದೆ ಎಂದು ಭಾರತ ಕಬಡ್ಡಿ ತಂಡದ ಮಾಜಿ ನಾಯಕ ಅನೂಪ್ ಕುಮಾರ್ ಹೇಳಿದರು.

ಸ್ಟಾರ್‌ ಸ್ಪೋರ್ಟ್ಸ್ ವಾಹಿನಿ ಆಯೊಜಿಸಿದ್ದ ‘ಟೋಟಲ್‌ ಕಬಡ್ಡಿ ಆಕ್ಷನ್‌ ಸ್ಪೆಷಲ್‘ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಪವನ್‌ ಅವರನ್ನು ಬೆಂಗಳೂರು ಬುಲ್ಸ್ ಈ ಬಾರಿ ಬಿಡುಗಡೆ ಮಾಡಿದ್ದರೂ ಮತ್ತೆ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲು ಪ್ರಯತ್ನಿಸಲಿದೆ‘ ಎಂದು ಅನೂಪ್ ಹೇಳಿದರು.

ADVERTISEMENT

ಮುಂಬೈನಲ್ಲಿ ನಡೆಯುವ ಹರಾಜು ಪ್ರಕ್ರಿಯೆನ್ನು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ ಸಂಜೆ 6.30ರಿಂದ ನೇರ ಪ್ರಸಾರ ಮಾಡಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.