ADVERTISEMENT

ಪ್ರೊ ಕಬಡ್ಡಿ: ಬೆಂಗಳೂರು ಪಂದ್ಯ ವೀಕ್ಷಿಸಲು ಸುದೀಪ್‌ ಕರೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 11 ಅಕ್ಟೋಬರ್ 2022, 8:41 IST
Last Updated 11 ಅಕ್ಟೋಬರ್ 2022, 8:41 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಬುಧವಾರ ನಡೆಯಲಿರುವ ಪ್ರೊ ಕಬಡ್ಡಿ ಸೀಸನ್‌ 9ರ ಬೆಂಗಳೂರು ಪಂದ್ಯ ವೀಕ್ಷಿಸಲು ನಟ ಕಿಚ್ಚ ಸುದೀಪ್‌ ನಾಡಿನ ಜನತೆಗೆ ಕರೆ ನೀಡಿದ್ದಾರೆ. ಈ ಬಗ್ಗೆ ಟ್ವೀಟ್‌ ಮಾಡಿರುವ ಕಿಚ್ಚ, ‘ಪ್ರೀತಿಯ ಕನ್ನಡಿಗರೇ ವಿವೋ ಪ್ರೋ ಕಬಡ್ಡಿ ನೋಡಲು ಮತ್ತೆ ನಮ್ಮ ಬುಲ್ಸ್ ಗಳಿಗೆ ಚಿಯರ್ ಮಾಡೋದಕ್ಕೆ ನಾನು ಬರುತ್ತಿದ್ದೇನೆ. ನೀವು ಕೂಡ ಬನ್ನಿ ಮಸ್ತ್ ಮಜಾ ಮಾಡೋಣ ನಮ್ಮ ಗೂಳಿಗಳಿಗೆ ತಾಕತ್ತು ತುಂಬೋಣ’ ಎಂದಿದ್ದಾರೆ.

ಸ್ಟಾರ್‌ ಸ್ಪೋರ್ಟ್ಸ್‌ ವಾಹಿನಿಯ ಪ್ರೊ ಕಬಡ್ಡಿ ಬ್ರ್ಯಾಂಡ್‌ ರಾಯಭಾರಿಯಾಗಿರುವ ಸುದೀಪ್‌, ಈ ಸೀಸನ್‌ ಪ್ರಾರಂಭಕ್ಕೆ ಆಹ್ವಾನ ನೀಡುವ ಕುರಿತು ವಿಡಿಯೊವನ್ನು ಮಾಡಿದ್ದರು. ಹಿಂದಿನ ಸೀಸನ್‌ನಲ್ಲಿ ಕೂಡ ಬೆಂಗಳೂರು ತಂಡವನ್ನು ಬೆಂಬಲಿಸಿದ್ದರು.

ಅ.12ರಂದು ಸಂಜೆ 7.30 ಕ್ಕೆ ಪ್ರಾರಂಭವಾಗುವ ಪಂದ್ಯದಲ್ಲಿ ಬೆಂಗಳೂರು ಬುಲ್ಸ್, ಬೆಂಗಾಲ್ ವಾರಿಯರ್ಸ್ ತಂಡವನ್ನು ಎದುರಿಸಲಿದೆ. ಅಕ್ಟೋಬರ್‌ 7ರಂದು ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಲೀಗ್‌ ಆರಂಭಗೊಂಡಿತ್ತು. ಎರಡನೇ ಪಂದ್ಯದಲ್ಲಿ ಮಾಜಿ ಚಾಂಪಿಯನ್‌ ಬೆಂಗಳೂರು ಬುಲ್ಸ್‌ ತಂಡ, ತೆಲುಗು ಟೈಟಾನ್ಸ್‌ ವಿರುದ್ಧ ಜಯ ಗಳಿಸಿ ಶುಭಾರಂಭ ಮಾಡಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.