ADVERTISEMENT

ಒಲಿಂಪಿಕ್ಸ್‌ ಪದಕ ಗೆಲ್ಲುವತ್ತ ಚಿತ್ತ: ಮನದೀಪ್‌ ಸಿಂಗ್‌

ಪಿಟಿಐ
Published 10 ಮಾರ್ಚ್ 2020, 19:32 IST
Last Updated 10 ಮಾರ್ಚ್ 2020, 19:32 IST
ಮನದೀಪ್‌ ಸಿಂಗ್‌
ಮನದೀಪ್‌ ಸಿಂಗ್‌   

ನವದೆಹಲಿ: ‘ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲುವತ್ತ ನಮ್ಮ ತಂಡ ಚಿತ್ತ ನೆಟ್ಟಿದೆ’ ಎಂದು ಭಾರತ ಹಾಕಿ ತಂಡದ ಸ್ಟ್ರೈಕರ್‌ ಮನದೀಪ್‌ ಸಿಂಗ್‌ ಹೇಳಿದ್ದಾರೆ.

‘ಇದು ಒಲಿಂಪಿಕ್‌ ವರ್ಷ; ಕೂಟಕ್ಕೆ ಅರ್ಹತೆ ಗಳಿಸಲು ಒಂದು ತಂಡವಾಗಿ ಸಾಕಷ್ಟು ಶ್ರಮಪಟ್ಟಿದ್ದೇವೆ. ಟೋಕಿಯೊನಲ್ಲಿ ಪದಕ ಒಲಿಸಿಕೊಳ್ಳುವ ಮೂಲಕ ದೇಶ ಹೆಮ್ಮೆ ಪಡುವಂತೆ ಮಾಡುತ್ತೇವೆ’ ಎಂದು ಹೇಳಿದರು.

‘ಹಾಕಿ ಇಂಡಿಯಾ ವಾರ್ಷಿಕ ಪ್ರಶಸ್ತಿಯನ್ನು ನಾನು ಎಂದೂ ಪಡೆದಿರಲಿಲ್ಲ. ಆದರೆ ಬಯಸಿದ್ದೆ. ಧನರಾಜ್‌ ಪಿಳ್ಳೈ ನನಗೆ ಆದರ್ಶ. ಅವರಿಂದ ಪ್ರಶಸ್ತಿ ಸ್ವೀಕರಿಸಿರುವುದು ಇನ್ನೂ ವಿಶೇಷ. ಪ್ರೋತ್ಸಾಹಧನವು ಆಟಗಾರರ ಉತ್ಸಾಹವನ್ನು ಇಮ್ಮಡಿಗೊಳಿಸುತ್ತದೆ. ಹಾಕಿ ಇಂಡಿಯಾ ಆಡಳಿತ ಮಂಡಳಿ ನಮ್ಮ ಪ್ರಯತ್ನ ಗುರುತಿಸಿರುವುದಕ್ಕೆ ಸಂತಸವಾಗುತ್ತಿದೆ’ ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.