ಬೆಂಗಳೂರು: ಅಗ್ರಶ್ರೇಯಾಂಕದ ಆಟಗಾರ್ತಿ ಕರ್ನಾಟಕದ ಸುಹಿತಾ ಮರೂರಿ ಹಾಗೂ ತರುಣ್ ವೆಟ್ರಿವೇಲನ್ ಅವರು ಇಲ್ಲಿ ನಡೆದ ಎಐಟಿಎ ಟ್ಯಾಲೆಂಟ್ ಸಿರೀಸ್ ಟೆನಿಸ್ ಟೂರ್ನಿಯ 16 ವರ್ಷದೊಳಗಿನ ಬಾಲಕಿಯರ ಹಾಗೂ ಬಾಲಕರ ವಿಭಾಗದಲ್ಲಿ ಪ್ರಶಸ್ತಿ ಮುಡಿಗೇರಿಸಿಕೊಂಡರು.
ಕಬ್ಬನ್ ಪಾರ್ಕ್ನಲ್ಲಿರುವ ಕರ್ನಾಟಕ ರಾಜ್ಯ ಲಾನ್ ಟೆನಿಸ್ ಸಂಸ್ಥೆ (ಕೆಎಸ್ಎಲ್ಟಿಎ) ಕ್ರೀಡಾಂಗಣದಲ್ಲಿ ನಡೆದ ಬಾಲಕಿಯರ ಫೈನಲ್ ಹಣಾಹಣಿಯಲ್ಲಿ ಸುಹಿತಾ (ರಾಷ್ಟ್ರೀಯ ರ್ಯಾಂಕಿಂಗ್ 7) 6–2, 6–1ರಿಂದ ವನ್ಯಾ ಶ್ರೀವಾಸ್ತವ ಅವರನ್ನು ಸೋಲಿಸಿದರು.
ಬಾಲಕರ ವಿಭಾಗದ ಫೈನಲ್ ಪಂದ್ಯದಲ್ಲಿ ಕರ್ನಾಟಕದ ತರುಣ್ 6–4, 2–6, 6–4ರಿಂದ ರಾಜ್ಯದವರೇ ಆದ ಮನದೀಪ್ ರೆಡ್ಡಿ ಕುದುಮಲ್ ಅವರನ್ನು ಮಣಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.