ADVERTISEMENT

ಸಿಧು ಮೂಸೆವಾಲಾ ಹತ್ಯೆ: ಆಹಾರ ಸೇವಿಸಲೊಪ್ಪದ ಸಾಕು ನಾಯಿಗಳು!

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 2 ಜೂನ್ 2022, 13:00 IST
Last Updated 2 ಜೂನ್ 2022, 13:00 IST
ಪಂಜಾಬ್ ಗಾಯಕ ಸಿಧು ಮೂಸೆವಾಲಾ
ಪಂಜಾಬ್ ಗಾಯಕ ಸಿಧು ಮೂಸೆವಾಲಾ   

ಬೆಂಗಳೂರು: ಪಂಜಾಬಿ ಗಾಯಕ ಸಿಧು ಮೂಸೆವಾಲಾ ಅವರನ್ನು ಮೇ 29ರಂದು ದುಷ್ಕರ್ಮಿಗಳು ಗುಂಡು ಹಾರಿಸಿ ಹತ್ಯೆಗೈದಿದ್ದರು.

ಗಾಯಕ ಸಿಧು ಹತ್ಯೆ ಪ್ರಕರಣ ರಾಷ್ಟ್ರದಾದ್ಯಂತ ಚರ್ಚೆಗೆ ಗ್ರಾಸವಾಗಿತ್ತು. ಪಂಜಾಬ್‌ನಲ್ಲಿ ಸೆಲೆಬ್ರಿಟಿಗಳಿಗೆ ನೀಡಿದ್ದ ಪೊಲೀಸ್ ಭದ್ರತೆಯನ್ನು ಹಿಂಪಡೆದ ಬೆನ್ನಲ್ಲೇ ಸಿಧು ಹತ್ಯೆಯಾಗಿತ್ತು.

ಸಿಧುವನ್ನು ಮನೆಯವರು, ಗೆಳೆಯರು ಮತ್ತು ಅಭಿಮಾನಿಗಳು ಮಾತ್ರವಲ್ಲ ಅವರ ಮನೆಯ ಸಾಕುನಾಯಿಗಳು ಕೂಡ ಮಿಸ್ ಮಾಡಿಕೊಳ್ಳುತ್ತಿವೆ. ಈ ಕುರಿತ ವಿಡಿಯೊ ಒಂದು ವೈರಲ್ ಆಗಿದೆ.

ADVERTISEMENT

ಸಿಧು ಮನೆಯಲ್ಲಿರುವ ಅವರ ಪ್ರೀತಿಯ ಸಾಕುನಾಯಿಗಳು ಸಿಧು ಸಾವಿಗೀಡಾದ ಬಳಿಕ ಆಹಾರ ತ್ಯಜಿಸಿವೆ.

ಶೆರಾ ಮತ್ತು ಬಘೀರ ಹೆಸರಿನ ಎರಡು ನಾಯಿಗಳು ಇದ್ದು, ಅವುಗಳು ಕಳೆದ ಭಾನುವಾರದಿಂದ ಆಹಾರ ಸೇವಿಸುತ್ತಿಲ್ಲ ಎಂದು ವಿಡಿಯೊದಲ್ಲಿ ಹೇಳಲಾಗಿದೆ.

ಸಿಧು ಪ್ರಾಣಿಪ್ರಿಯರಾಗಿದ್ದು, ಮುದ್ದಿನ ಸಾಕುನಾಯಿಗಳನ್ನು ಅಪಾರವಾಗಿ ಪ್ರೀತಿಸುತ್ತಿದ್ದರು ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.