ADVERTISEMENT

ಕಾಡೊಳಗಿನ ಕಲೆ ಅಮ್ಚೆ ಮದ್ಲೆ

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2020, 3:29 IST
Last Updated 13 ಸೆಪ್ಟೆಂಬರ್ 2020, 3:29 IST

ಉತ್ತರ ಕನ್ನಡ ಜಿಲ್ಲೆಯ ಸಾಂಸ್ಕೃತಿಕ ವೈಭವದಲ್ಲಿ ಸಿದ್ದಿ ಜನಾಂಗದ ಕೊಡುಗೆ ಅಪಾರ. ಜಿಲ್ಲೆಯ ಮುಂಡಗೋಡ, ಅಂಕೋಲಾ, ಯಲ್ಲಾಪುರ, ಹಳಿಯಾಳ, ಜೊಯಿಡಾಗಳಲ್ಲಿ ಸಾವಿರಾರು ಕುಟುಂಬಗಳು ನೆಲೆಯೂರಿವೆ. ಇವರು ತಲೆತಲಾಂತರದಿಂದ ಸಾಂಸ್ಕೃತಿಕ ಕಲೆಗಳ ಒಲವು ಬೆಳೆಸಿಕೊಂಡು ಬಂದಿದ್ದು, ತಾವು ನೆಲೆಯೂರಿರುವ ನೆಲ, ಪ್ರಕೃತಿಯನ್ನು ಅಪ್ಪಿಕೊಂಡಿದ್ದಾರೆ. ಜನಪದ ಸೊಗಡಿನ ಹಾಡು, ನೃತ್ಯಗಳೇ ಇವರನ್ನು ಒಂದುಗೂಡಿಸಿವೆ. ಅನೇಕರು ತಮ್ಮ ವಿಭಿನ್ನ ಸಂಸ್ಕೃತಿಯನ್ನು ಉಳಿಸಿ, ಬೆಳೆಸಿ, ಜಗದಗಲಕ್ಕೆ ಪಸರಿಸುವ ಕನಸು ಹೊತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.