
ಪ್ರಜಾವಾಣಿ ವಾರ್ತೆ
ಡಾ.ಕೆ.ಬಿ. ರಂಗಸ್ವಾಮಿ
ಬಿಲಗಳ ದ್ವಾರಕೆ
ತೋರಣ ಚಪ್ಪರ
ಒಳಗಡೆ ಇಲಿಗಳ
ಸಂಭ್ರಮ ಸಡಗರ
ವಧುವಿನ ಕಡೆಯ
ಇಲಿಗಳ ದಂಡು
ಹರುಷದಿ ಕುಣಿಯಿತು
ದಿಬ್ಬಣ ಕಂಡು
ಗಾಂಭೀರ್ಯದಿoದ
ಚೆಂದದ ವರ ಇಲಿ
ಕುಳಿತಿತು ಬಿಮ್ಮಗೆ
ಮಂಟಪದಲ್ಲಿ
ನಾಚುತ ಬಳುಕುತ
ಬಂದಿತು ವಧು ಇಲಿ
ತವರನು ತೊರೆಯುವ
ದುಗುಡವು ಮನದಲಿ
ಡುಂ ಡುಂ ಡುಂ ಡುಂ
ಮೇಳದ ಸದ್ದಿಗೆ
ತಾಳಿಯು ಬಿದ್ದಿತು
ವಧುವಿನ ಕತ್ತಿಗೆ
ಅಕ್ಷತೆ ಎರಚಿ
ಹರಸಿತು ಇಲಿಗಣ
ಕೊಬ್ಬರಿ ಮಿಠಾಯಿ
ಭೂರಿ ಭೋಜನ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.