ADVERTISEMENT

ಕೈ, ಕಾಲಿಗೆ ಕಪ್ಪು ದಾರ ಕಟ್ಟುವುದು: ಇದರಿಂದ ಸಿಗುವ ಪ್ರಯೋಜನಗಳೇನು?

ಎಲ್.ವಿವೇಕಾನಂದ ಆಚಾರ್ಯ
Published 17 ನವೆಂಬರ್ 2025, 5:43 IST
Last Updated 17 ನವೆಂಬರ್ 2025, 5:43 IST
<div class="paragraphs"><p>ಚಿತ್ರ: ಎಐ</p></div>
   

ಚಿತ್ರ: ಎಐ

ಅನೇಕರು ತಮ್ಮ ಕಾಲುಗಳಿಗೆ ಕಪ್ಪು ದಾರ ಕಟ್ಟುತ್ತಾರೆ. ಅದರಲ್ಲಿಯೂ ಮಕ್ಕಳ ಕೈ, ಕುತ್ತಿಗೆ ಹಾಗೂ ಸೊಂಟಕ್ಕೆ ಕಪ್ಪು ದಾರ ಕಟ್ಟಲಾಗುತ್ತದೆ. ಇದನ್ನು ಕಟ್ಟುವುದಕ್ಕೆ ಕಾರಣವೇನು? ಇದರಿಂದಾಗುವ ಪ್ರಯೋಜನಗಳೇನು ಎಂಬುದನ್ನು ತಿಳಿಯೋಣ.

  • ವಾಸ್ತವವಾಗಿ ಕಾಲಿಗೆ ಕಪ್ಪು ದಾರ ಕಟ್ಟುವುದರಿಂದ ಶನಿ ದೋಷದ ಪ್ರಭಾವ ಕಡಿಮೆಯಾಗುತ್ತದೆ. ಆದ್ದರಿಂದ ಶನಿವಾರ ಶನಿ ದೇವರಿಗೆ ಪ್ರಾರ್ಥನೆ ಸಲ್ಲಿಸಿ ಕಾಲಿಗೆ ಕಪ್ಪು ದಾರ ಕಟ್ಟಿಕೊಳ್ಳುವುದರಿಂದ ಶುಭವಾಗಲಿದೆ ಎಂಬ ನಂಬಿಕೆ ಇದೆ.

    ADVERTISEMENT
  • ಜಾತಕಕ್ಕೆ ಅನುಸಾರವಾಗಿ ರಾಹು ಕೇತುವಿನ ದೋಷವಿದ್ದರೆ, ಕಪ್ಪು‌ ದಾರ ಧರಿಸುವುದರಿಂದ ಪರಿಹಾರ ಸಿಗುತ್ತದೆ. ಇದರಿಂದ ವೈವಾಹಿಕ ಜೀವನ ಹಾಗೂ ಆರ್ಥಿಕ ಸಮಸ್ಯೆಯೂ ಬಗೆ ಹರಿಯುತ್ತದೆ.

  • ಕಪ್ಪು ದಾರವನ್ನು ಪುರುಷರು ಬಲಗಾಲಿಗೆ ಹಾಗೂ ಹೆಣ್ಣು ಮಕ್ಕಳು ಎಡಗಾಲಿಗೆ  ಕಟ್ಟಿಕೊಳ್ಳುವುದು ಒಳಿತು ಎಂಬ ನಂಬಿಕೆ  ಇದೆ. 

  • ಚಿಕ್ಕ ಮಕ್ಕಳು ವಿನಾಕಾರಣ ಅಳುತ್ತಿದ್ದರೆ, ಪದೇ ಪದೇ ‍ ಅನಾರೋಗ್ಯಕ್ಕೆ ತುತ್ತಾದಾಗ  ಕಪ್ಪು ದಾರವನ್ನು ಕಟ್ಟಲಾಗುತ್ತದೆ. ಕಪ್ಪು ದಾರವು ದೃಷ್ಟಿ ನಿವಾರಣೆ ಮಾಡುತ್ತದೆ ಎಂಬ ನಂಬಿಕೆ ಇದೆ. 

ಕಪ್ಪು ದಾರ ಕಟ್ಟಲು ಸಾಂಪ್ರದಾಯಿಕ ಸಲಹೆಗಳು:

  • ಕಪ್ಪು ದಾರದ ಸುತ್ತಲೂ 9 ಗಂಟು ಹಾಕಿ ನಂತರ ಧರಿಸಬೇಕು. 

  • ಕಪ್ಪು ದಾರ ಧರಿಸುವ ಮೊದಲು ದಾರವನ್ನು ಶನಿ ಅಥವಾ ಆಂಜನೇಯನ ದೇವಸ್ಥಾನದಲ್ಲಿ ಪೂಜೆ ಮಾಡಿಸುವುದು ಸೂಕ್ತ. ಇದರಿಂದ ದಾರಕ್ಕೆ ಸಕಾರಾತ್ಮಕ ಶಕ್ತಿ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಇದೆ. 

  • ಕಪ್ಪುದಾರವನ್ನು ಶುಭ ಮುಹೂರ್ತದಲ್ಲಿ ಧರಿಸಿದರೆ ಉತ್ತಮವೆಂದು ಜ್ಯೋತಿಷ ಹೇಳುತ್ತದೆ.

  • ತೀವ್ರ ಆರೋಗ್ಯ ಸಮಸ್ಯೆ ಇದ್ದವರು ಆಂಜನೇಯನಿಗೆ ಪೂಜಿಸಿದ ನಂತರ ಕುತ್ತಿಗೆಗೆ ಕಪ್ಪುದಾರ ಕಟ್ಟುವುದು ಒಳಿತು.

  • ಕಪ್ಪುದಾರ ಕಟ್ಟಿಕೊಂಡ ಮೇಲೆ ರುದ್ರಗಾಯಿತ್ರಿ ಮಂತ್ರವನ್ನು ಪಠಿಸಬೇಕು.

  • ’ಓಂ ತತ್ಪುರುಷಾಯ ವಿದ್ಮಹೇ ಮಹಾದೇವಾಯ ಧೀಮಹಿ ತನ್ನೋರುದ್ರ ಪ್ರಚೋದಯಾತ್’

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.