ADVERTISEMENT

ಮನೆಯಲ್ಲಿನ ತುಳಸಿ ಗಿಡ ಒಣಗಲು ಕಾರಣವೇನು? ಇಲ್ಲಿದೆ ಮಾಹಿತಿ

ಎಲ್.ವಿವೇಕಾನಂದ ಆಚಾರ್ಯ
Published 11 ನವೆಂಬರ್ 2025, 5:45 IST
Last Updated 11 ನವೆಂಬರ್ 2025, 5:45 IST
<div class="paragraphs"><p>ಚಿತ್ರ: ಪ್ರಜಾವಾಣಿ</p></div>
   

ಚಿತ್ರ: ಪ್ರಜಾವಾಣಿ

ತುಳಸಿ ಗಿಡಕ್ಕೆ ಪೂಜೆ ಸಲ್ಲಿಸಿದರೆ ಇಷ್ಟಾರ್ಥಗಳು ಸಿದ್ದಿಸುತ್ತವೆ ಎಂಬ ನಂಬಿಕೆ ಇದೆ. ಆದರೆ ಮನೆಯಲ್ಲಿರುವ ತುಳಸಿ ಕೆಲವೊಮ್ಮೆ ಒಣಗಿ ಹೋಗುತ್ತದೆ. ತುಳಸಿ ಒಣಗುವುದು ಎಚ್ಚರಿಕೆಯ ಸಂದೇಶ ಎಂದು ಹೇಳಲಾಗುತ್ತದೆ. ಹಾಗಾದರೆ ತುಳಸಿ ಗಿಡ ಒಣಗಳು ಕಾರಣವೇನು ಎಂಬುದನ್ನು ನೋಡೋಣ. 

  • ತುಳಸಿ ಗಿಡವನ್ನು ಕುಂಡದಲ್ಲಿ ಹಾಕಿ ಬೆಳೆಸುವುದು ಸೂಕ್ತವಲ್ಲ. ಕುಂಡದಲ್ಲಿ ತುಳಸಿ ಗಿಡ ಬೇರು ಬಿಡುವುದಕ್ಕೆ ಹೆಚ್ಚು ಸ್ಥಳಾವಕಾಶ ಇರುವುದಿಲ್ಲ. ಆದ್ದರಿಂದ ‌ನೆಲದಲ್ಲಿಯೇ ಬೆಳೆಸುವುದು ಉತ್ತಮ. ಅಥವಾ ದೊಡ್ಡ ಕುಂಡದಲ್ಲಿ ಬೆಳೆಸಬಹುದು.

    ADVERTISEMENT
  • ತುಳಸಿಯ ಎಲೆಯನ್ನು ಉಗುರಿನಿಂದ ಕೀಳಬಾರದು. ಒಂದು ವೇಳೆ ಎಲೆಗಳನ್ನು ಕಿತ್ತರೆ ತುಳಸಿ ಒಣಗುವ ಸಾಧ್ಯತೆ ಇರುತ್ತದೆ. 

  • ಅಶುದ್ದವಾದ ನೀರನ್ನು ತುಳಸಿ ಗಿಡಕ್ಕೆ ಹಾಕಬಾರದು. ಆಗಾಗ ಹಳೆಯ ಮಣ್ಣನ್ನು ತೆಗೆದು, ಹೊಸ ಮಣ್ಣನ್ನು ಹಾಕುವುದು ಅಥವಾ ಮೃತ್ತಿಕೆ ತಂದು ಹಾಕಿದರೆ ಚೆನ್ನಾಗಿ ಬೆಳೆಯುತ್ತದೆ. 

  • ನಿಮ್ಮ ಮನೆಯ ಮೇಲೆ ದುಷ್ಟಗ್ರಹದ ಪ್ರಭಾವ ಬಿದ್ದಾಗ, ಮಾಟಮಂತ್ರಗಳ ಪ್ರಯೋಗವಾದಾಗ ಅದನ್ನು ತುಳಸಿ ತಡೆಯುತ್ತದೆ ಎಂಬ ನಂಬಿಕೆ ಇದೆ. ಇಂತಹ ಸನ್ನಿವೇಶದಲ್ಲಿ ತುಳಸಿ ಒಣಗುವುದುಂಟು. ಇದು ಎಚ್ಚರಿಕೆಯ ಸಂದೇಶವೆಂದೆ ಭಾವಿಸಬೇಕು.

  • ಪ್ರತಿದಿನ ತುಳಸಿಗೆ ನೀರು ಹಾಕುವುದರಿಂದ ಮಾಟ ಮಂತ್ರ ಹಾಗೂ ತಾಂತ್ರಿಕ ದೋಷಗಳು ತಟ್ಟುವುದಿಲ್ಲ.

  • ತುಳಸಿಯನ್ನು ಪೂರ್ವ ಅಥವಾ ಉತ್ತರಾಭಿಮುಖವಾಗಿ ಇಟ್ಟು ಪೂಜೆಸಲ್ಲಿಸುವುದು ಉತ್ತಮ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.