ADVERTISEMENT

ಕಾರ್ತಿಕ ಮಾಸದಲ್ಲಿ ದೀಪವನ್ನು ಹೀಗೆ ಬೆಳಗಿಸಿದರೆ ಫಲ ಹೆಚ್ಚು: ಜ್ಯೋತಿಷ

ಎಲ್.ವಿವೇಕಾನಂದ ಆಚಾರ್ಯ
Published 23 ಅಕ್ಟೋಬರ್ 2025, 5:58 IST
Last Updated 23 ಅಕ್ಟೋಬರ್ 2025, 5:58 IST
   

ಕಾರ್ತಿಕವನ್ನು ದೀಪಾರಾಧನೆಯ ಮಾಸ ಎಂತಲೂ ಕರೆಯುತ್ತಾರೆ. ಕಾರ್ತಿಕ ಮಾಸದಲ್ಲಿ ದೀಪಗಳನ್ನು ಬೆಳಗಿಸುವುದು ಶುಭವೆಂದು ಜ್ಯೋತಿಷ ಹೇಳುತ್ತದೆ. ಹಾಗಾದರೆ ಕಾರ್ತಿಕ ಮಾಸದಲ್ಲಿ ದೀಪವನ್ನು ಹಚ್ಚುವಾಗ ಪಾಲಿಸಬೇಕಾದ ನಿಯಮಗಳು ಯಾವುವು? ಎಂಬುದನ್ನು ಜ್ಯೋತಿಷಿ ಎಲ್. ವಿವೇಕಾನಂದ ಆಚಾರ್ಯ ಅವರು ವಿವರಿಸಿದ್ದಾರೆ. 

  • ವೀಳ್ಯೆದೆಲೆಯ ಮೇಲೆ ಬಿಲ್ವಪತ್ರೆ ಇಟ್ಟು, ಬಿಲ್ವಪತ್ರೆಯ ಮೇಲೆ ದೀಪ ಹಚ್ಚುವುದರಿಂದ ಲಕ್ಷ್ಮೀ ದೇವಿಯ ಅನುಗ್ರಹ ಲಭಿಸುತ್ತದೆ. ಇದರಿಂದ ಬಡತನ ನಿವಾರಣೆಯ ಜೊತೆಗೆ ಜಾತಕದಲ್ಲಿನ ದೋಷಗಳು ‌ನಿವಾರಣೆಯಾಗುತ್ತವೆ ಎಂದು ಜ್ಯೋತಿಷ ಹೇಳುತ್ತದೆ. 

  • ಬಿಲ್ವಪತ್ರೆ ಮರದ ಕೆಳಗೆ ದೀಪ ಹಚ್ಚುವುದರಿಂದ, ಶಿವನ ಅನುಗ್ರಹ ದೊರೆಯಲಿದೆ ಎಂದು ಹೇಳಲಾಗುತ್ತದೆ. 

    ADVERTISEMENT
  • ಸೂರ್ಯೋದಯಕ್ಕೆ ಮುನ್ನ ಹಾಗೂ ಸೂರ್ಯಾಸ್ತದ ನಂತರ ದೀಪ ಹಚ್ಚುವುದು ಶ್ರೇಷ್ಠ ಎಂದು ಪರಿಗಣಿಸಲಾಗಿದೆ.

  • ಕಾರ್ತಿಕ ಮಾಸವನ್ನು ಆಚರಣೆ ಮಾಡುವವರು ಮಾಂಸಾಹಾರವನ್ನು ಸೇವಿಸಬಾರದು ಎಂದು ಹೇಳಲಾಗುತ್ತದೆ.

  • ‌ನುಗ್ಗೆಕಾಯಿ, ಸೋರೆಕಾಯಿ, ಬದನೆಕಾಯಿ, ಮೂಲಂಗಿ, ಅಣಬೆ ಹಾಗೂ ಕುಂಬಳಕಾಯಿ ಸೇವಿಸಬಾರದು.

  • ಕಾರ್ತಿಕ ಮಾಸವನ್ನು ಆಚರಣೆ ಮಾಡುವವರು ನಿಷ್ಠೆಯಿಂದ ನಡೆದುಕೊಳ್ಳದೆ ಇದ್ದರೆ, ರೋಗ ಪೀಡಿತರಾಗುವ, ಮಾನಸಿಕ ಚಿಂತೆಗೆ ಅನುಭವಿಸುವ, ಮನೆಯಲ್ಲಿ ಜಗಳ‌ ಹಾಗೂ ದಾರಿದ್ರ್ಯ ಪ್ರಾಪ್ತಿಯಾಗುವ ಸಾಧ್ಯತೆ ಹೆಚ್ಚು ಎಂದು ಜ್ಯೋತಿಷಿ ವಿವೇಕಾನಂದ ಆಚಾರ್ಯ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.