
ಚಿತ್ರ: ಎಐ
ಹಿಂದೂ ಧರ್ಮದಲ್ಲಿ ತುಳಸಿಗಿಡಕ್ಕೆ ಪೂಜನೀಯ ಸ್ಥಾನವಿದೆ. ಮನೆಯಲ್ಲಿ ಪ್ರತಿದಿನ ತುಳಸಿ ಗಿಡಕ್ಕೆ ಪೂಜೆ ಮಾಡುವುದರಿಂದ ಕುಟುಂಬದಲ್ಲಿ ಸುಖ, ಶಾಂತಿ ಹಾಗೂ ನೆಮ್ಮದಿ ಲಭಿಸುತ್ತದೆ ಎಂಬ ನಂಬಿಕೆ ಇದೆ.
ತುಳಸಿಯ 4 ವಿಧಗಳು
ಶ್ಯಾಮ ತುಳಸಿ: ಈ ತುಳಸಿ ಶ್ರೀಕೃಷ್ಣನಿಗೆ ಪ್ರಿಯವಾದ ತುಳಸಿಯಾಗಿದೆ. ಆದ್ದರಿಂದಲೇ ಈ ತುಳಸಿಗೆ ಶ್ಯಾಮ ತುಳಸಿಯೆಂಬ ಹೆಸರು ಬಂದಿದೆ. ಶ್ಯಾಮ ತುಳಸಿಯ ಎಲೆಗಳು ಆಳವಾದ ನೇರಳೆ ಬಣ್ಣದಿಂದ ಕೂಡಿರುತ್ತವೆ. ಇದನ್ನು ಕೃಷ್ಣ ತುಳಸಿ ಎಂತಲೂ ಕರೆಯತಲಾಗುತ್ತದೆ. ಮಾತ್ರವಲ್ಲ, ಹೆಚ್ಚಾಗಿ ಇದನ್ನೇ ಪೂಜಿಸುವುದನ್ನು ಕಾಣಬಹುದು.
ರಾಮ ತುಳಸಿ: ಶ್ರೀ ರಾಮನಿಗೆ ಸಮರ್ಪಿತವಾದ ತುಳಸಿಯೇ ರಾಮ ತುಳಸಿ. ಮನೆಯಲ್ಲಿ ರಾಮತುಳಸಿ ಇದ್ದರೆ ಸುಖ, ಶಾಂತಿ ನೆಲೆಸುತ್ತದೆ ಎಂಬ ನಂಬಿಕೆ ಇದೆ. ದುಷ್ಟ ಶಕ್ತಿ ಹಾಗೂ ನಕಾರಾತ್ಮಕತೆಯಿಂದ ಮನೆಯವರನ್ನು ರಕ್ಷಿಸುತ್ತವೆ ಎಂಬ ನಂಬಿಕೆ ಇದೆ.
ವನ ತುಳಸಿ ಅಥವಾ ನಿಂಬೆ ತುಳಸಿ: ವನ ತುಳಸಿಯನ್ನು ಅರಣ್ಯ ತುಳಸಿ ಎಂತಲೂ ಕರೆಯುತ್ತಾರೆ. ಇದು ಬೇರೆಲ್ಲಾ ತುಳಸಿಗಿಡಕ್ಕಿಂತ ಎತ್ತರವಾಗಿ ಮತ್ತು ದೈತ್ಯವಾಗಿ ಬೆಳೆಯುತ್ತದೆ. ಆದ್ದರಿಂದಲೇ ಇದಕ್ಕೆ ವನ ತುಳಸಿ, ಅರಣ್ಯ ತುಳಸಿ ಎಂಬ ಹೆಸರು ಬಂದಿದೆ. ವಿಷ್ಟುವಿನ ಪೂಜೆಯಲ್ಲಿ ಈ ತುಳಸಿ ಬಳಸುವುದು ಸೂಕ್ತವಾಗಿದೆ.
ಶ್ವೇತ ತುಳಸಿ: ಶ್ವೇತ ತುಳಸಿಯನ್ನು ವಿಷ್ಣು ತುಳಸಿ ಎಂದೂ ಕರೆಯುತ್ತಾರೆ. ಈ ತುಳಸಿಯಲ್ಲಿ ಬಿಳಿ ಬಣ್ಣದ ಹೂವುಗಳನ್ನು ಕೂಡ ನೋಡಬಹುದು. ಇದು ಬಯಲು ಪ್ರದೇಶ ಹಾಗೂ ಕಾಡುಗಳಲ್ಲಿ ಕಂಡುಬರುತ್ತದೆ. ಅಷ್ಟಾಗಿ ಪೂಜಿಸುವುದಿಲ್ಲ.
ತುಳಸಿಯ ಲಾಭಗಳು
ಮನೆಯನ್ನು ದುಷ್ಟಶಕ್ತಿಯಿಂದ ರಕ್ಷಿಸುತ್ತದೆ.
ಮನೆಗೆ ಶುಭಫಲ ತಂದುಕೊಡುತ್ತದೆ.
ವಾಸ್ತುದೋಷಗಳು ಪರಿಹಾರವಾಗುತ್ತದೆ.
ಲಕ್ಷ್ಮೀಯ ಅನುಗ್ರಹ ಪ್ರಾಪ್ತಿಯಾಗುತ್ತದೆ ಎಂದು ಜ್ಯೋತಿಷದಲ್ಲಿ ಹೇಳಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.