ADVERTISEMENT

ಬಾದಾಮಿ ತಾಲ್ಲೂಕು ಕೆರೂರಿನ ಬಿಡಿಸಿಸಿ ಬ್ಯಾಂಕ್‌ನಲ್ಲಿ ಕಳ್ಳತನಕ್ಕೆ ಯತ್ನ

​ಪ್ರಜಾವಾಣಿ ವಾರ್ತೆ
Published 16 ಜುಲೈ 2018, 5:19 IST
Last Updated 16 ಜುಲೈ 2018, 5:19 IST
ಕಳವಿಗೆ ಬಂದವರು ಬ್ಯಾಂಕ್‌ನಲ್ಲಿ ಗ್ಯಾಸ್‌ಕಟರ್‌ ಇತ್ಯಾದಿ ವಸ್ತುಗಳನ್ನು ಅಲ್ಲಿಯೇ ಬಿಟ್ಟು ಹೋಗಿದ್ದಾರೆ.
ಕಳವಿಗೆ ಬಂದವರು ಬ್ಯಾಂಕ್‌ನಲ್ಲಿ ಗ್ಯಾಸ್‌ಕಟರ್‌ ಇತ್ಯಾದಿ ವಸ್ತುಗಳನ್ನು ಅಲ್ಲಿಯೇ ಬಿಟ್ಟು ಹೋಗಿದ್ದಾರೆ.   

ಬಾಗಲಕೋಟೆ:ಬಾದಾಮಿ ತಾಲ್ಲೂಕು ಕೆರೂರಿನ ಬಿಡಿಸಿಸಿ ಬ್ಯಾಂಕ್‌ನಲ್ಲಿ ಕಳ್ಳತನಕ್ಕೆ ಪ್ರಯತ್ನಿಸಲಾಗಿದೆ.

ಕಟ್ಟಡದ ಹಿಂಬದಿ ಕಿಟಕಿ ಮುರಿದು ಬ್ಯಾಂಕ್ ಒಳಗೆ ಹೊಕ್ಕಿರುವ ಕಳ್ಳರು ಗ್ಯಾಸ್ ಕಟರ್, ಕಳ್ಳತನಕ್ಕೆ ಬಳಸಿದ ಸಲಕರಣೆ ಗಳನ್ನು ಸ್ಥಳದಲ್ಲೇ ಬಿಟ್ಟಿದ್ದಾರೆ.

ಬ್ಯಾಂಕಿನ ಸಿ.ಸಿ ಟಿ.ವಿ ಕ್ಯಾಮೆರಾದ ಹಾರ್ಡ್ ಡಿಸ್ಕ್ ಹೊತ್ತೊಯ್ದಿದ್ದಾರೆ. ಸ್ಥಳಕ್ಕೆ ಕೆರೂರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.

ADVERTISEMENT

ಬ್ಯಾಂಕ್‌‌ನಲ್ಲಿ ನಗದು, ಚಿನ್ನಾಭರಣ ಕಳ್ಳತನ ಆಗಿರುವ ಬಗ್ಗೆ ಇನ್ನೂ ಸ್ಪಷ್ಟ ಮಾಹಿತಿ ಇಲ್ಲ. ಬ್ಯಾಂಕ್ ವ್ಯವಸ್ಥಾಪಕ ಎಚ್.ಡಿ.ಪೂಜಾರ ಬೇರೆ ಊರಿಗೆ ತೆರಳಿದ್ದು, ಅವರಿಗೆ ಮಾಹಿತಿ ನೀಡಿದ್ದೇವೆ. ಅವರು ಬಂದ ಮೇಲೆ ಕಳ್ಳತನ ನಡೆದಿರುವ ಬಗ್ಗೆ ಸ್ಪಷ್ಟತೆ ಸಿಗಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಳ್ಳರು ಬ್ಯಾಂಕ್‌ನ ಕಿಟಕಿಯನ್ನು ಮುರಿದಿರುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.