ADVERTISEMENT

ದೇಶದಲ್ಲಿ ಎಲ್ಲರಿಗೂ ಒಂದೇ ಕಾನೂನು- ಒಂದೇ ಮದುವೆ, ಎರಡು ಮಕ್ಕಳಿರಬೇಕು: ಯತ್ನಾಳ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2022, 9:14 IST
Last Updated 3 ಅಕ್ಟೋಬರ್ 2022, 9:14 IST
ಶಾಸಕ ಬಸನಗೌಡ ಪಾಟೀಲ ಯತ್ನಾಳ
ಶಾಸಕ ಬಸನಗೌಡ ಪಾಟೀಲ ಯತ್ನಾಳ    

ಬಾಗಲಕೋಟೆ: ದೇಶದಲ್ಲಿ ಎಲ್ಲರೂ ಒಂದೇ ಮದುವೆಯಾಗಬೇಕು. ಎರಡು ಮಕ್ಕಳನ್ನು ಹಡಿಯಬೇಕು. ಇದನ್ನು ಒಪ್ಪದವರಿಗೆ ಮಹಾತ್ಮ ಗಾಂಧಿ ಪಾಲು ಮಾಡಿಕೊಟ್ಟಿದ್ದಾರೆ. ಅಲ್ಲಿಗೆ ಹೊಯಕೊಂತ ಹೋಗರಿ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.

ಬಾಗಲಕೋಟೆಯ ನವನಗರದಲ್ಲಿ ಭಾನುವಾರ ರಾತ್ರಿ ಹಮ್ಮಿಕೊಂಡಿದ್ದ ದಸರಾ ಉತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾಡನಾಡಿದ ಅವರು, ದೇಶದಲ್ಲಿ ಕಾಮನ್‌ ಸಿವಿಲ್‌ ಕೋಡ್‌ ಜಾರಿಗೊಳಿಸಲಾಗುವುದು ಎಂದರು.

ವಕ್ಫ್‌ ಕಾನೂನು ರದ್ದು ಮಾಡಲಾಗುವುದು. ಅಯೋಧ್ಯೆಯಲ್ಲಿ ರಾಮ ಮಂದಿರ ಕಟ್ಟುತ್ತಿದ್ದೇವೆ. ಮಥುರಾದಲ್ಲಿ ಕೃಷ್ಣ ಮಂದಿರ ನಿರ್ಮಾಣ ಮಾಡಲಾಗುವುದು ಎಂದು ಹೇಳಿದರು.

ADVERTISEMENT

ಗಣಪತಿ ಕೂಡಿಸಲು ಅನುಮತಿ ಪಡೆದರೆ ಭಾರತ, ಪಾಕಿಸ್ತಾನಕ್ಕಿಂತ ಕನಿಷ್ಠ ಆಗುತ್ತದೆ. ರಾಜ್ಯ ಹಾಗೂ ಕೇಂದ್ರದಲ್ಲಿ ನಮ್ಮದೇ ಸರ್ಕಾರವಿದೆ. ನಾನು ವಿಜಯಪುರದಲ್ಲಿ ಶಾಸಕನಿದ್ದೇನೆ. ಹೀಗಿದ್ದಾಗ, ಅನುಮತಿ ಏಕೆ ಬೇಕು. ಎಲ್ಲಿ ಬೇಕಾದರೂ ಕೂಡಿಸಬಹುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.