ADVERTISEMENT

ತಮಿಳುನಾಡಿನಿಂದ ಬಂದ ಲಾರಿಯಲ್ಲಿ ವೃದ್ಧೆಯ ರುಂಡ ಪತ್ತೆ

​ಪ್ರಜಾವಾಣಿ ವಾರ್ತೆ
Published 22 ಜುಲೈ 2021, 8:07 IST
Last Updated 22 ಜುಲೈ 2021, 8:07 IST

ಬಾಗಲಕೋಟೆ: ತಮಿಳುನಾಡಿನ ಮಧುರೈನಿಂದ ಇಳಕಲ್ ನಗರಕ್ಕೆ ಬಂದ ಸರಕು ತುಂಬಿದ ಲಾರಿಯಲ್ಲಿ ವೃದ್ಧೆಯ ರುಂಡ ಪತ್ತೆಯಾಗಿದೆ.

ಅಂದಾಜು 65 ರಿಂದ 70 ವರ್ಷದ ಅಪರಿಚಿತ ಮಹಿಳೆಯ ತಲೆ ಕತ್ತರಿಸಿ ಚೀಲದಲ್ಲಿ ತುಂಬಿ ಲಾರಿಯಲ್ಲಿ (ಟಿಎನ್-52, ಆರ್-7952) ಎಸೆಯಲಾಗಿದೆ.

ಲಾರಿಯಲ್ಲಿದ್ದ ಗ್ರಾನೈಟ್ ಫಲಕಗಳನ್ನು ಇಳಿಸುವಾಗ ಒಳಗೆ ಬಿದ್ದಿದ್ದ ಚೀಲ ತೆಗೆದು ಚಾಲಕ ನೋಡಿದಾಗ ರುಂಡ ಕಂಡು ಬಂದಿದೆ.

ADVERTISEMENT

ಕೊಲೆ ಮಾಡಿ ಸಾಕ್ಷ್ಯ ನಾಶಪಡಿಸುವ ಹಿನ್ನೆಲೆ ಲಾರಿಯಲ್ಲಿ ರುಂಡ ಎಸೆದಿರುಬಹುದು ಎಂದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಪೊಲೀಸರು ಶಂಕಿಸಿದ್ದಾರೆ.

ಲಾರಿ ಚಾಲಕ ರಾಜಾ ಕಲ್ಯಾಣಸುಂದರ್ ನೀಡಿದ ದೂರಿನ ಹಿನ್ನೆಲೆಯಲ್ಲಿ ಇಳಕಲ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.