ADVERTISEMENT

ಎಂಇಎಸ್‌ನಿಂದ ‘ಮಹಾಮೇಳಾವ’: ವಿಜಯ್ ದೇವನೆಗೆ ಪ್ರವೇಶ ನಿರಾಕರಣೆ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2021, 14:44 IST
Last Updated 13 ಡಿಸೆಂಬರ್ 2021, 14:44 IST
ಮಹಾಮೇಳ ಆಯೋಜನೆಗೆ ಎಂಇಎಸ್‌ ಕಾರ್ಯಕರ್ತರು ನಿರ್ಮಿಸಿದ್ದ ವೇದಿಕೆ
ಮಹಾಮೇಳ ಆಯೋಜನೆಗೆ ಎಂಇಎಸ್‌ ಕಾರ್ಯಕರ್ತರು ನಿರ್ಮಿಸಿದ್ದ ವೇದಿಕೆ   

ಬೆಳಗಾವಿ: ಮಹಾರಾಷ್ಟ್ರ ಏಕೀಕರಣ ಸಮಿತಿಯು (ಎಂಇಎಸ್)ನಗರದಲ್ಲಿ ಸೋಮವಾರ ಆಯೋಜಿಸಿದ್ದ ಮಹಾಮೇಳಾವದಲ್ಲಿ ಪಾಲ್ಗೊಳ್ಳಲು ಬರುತ್ತಿದ್ದ ಶಿವಸೇನಾದ ಕೊಲ್ಹಾಪುರ ಜಿಲ್ಲಾ ಘಟಕದ ಅಧ್ಯಕ್ಷ ವಿಜಯ್ ದೇವನೆ ಹಾಗೂ ಇತರರನ್ನು ಕರ್ನಾಟಕ ಪೊಲೀಸರು ನಿಪ್ಪಾಣಿ ತಾಲ್ಲೂಕಿನ ಕುಗನೊಳ್ಳಿ ಚೆಕ್‌ಪೋಸ್ಟ್‌ನಲ್ಲಿ ತಡೆದು ವಾಪಸ್ ಕಳುಹಿಸಿದರು.

ಎಂಇಎಸ್‌ನವರು ಮಹಾಮೇಳಾವದಲ್ಲಿ ಭಾಗಿಯಾಗಲು ವಿಜಯ್ ಅವರಿಗೆ ಆಹ್ವಾನ ನೀಡಿದ್ದರು. ಕರ್ನಾಟಕದ ಗಡಿಗೆ ಬಂದಿದ್ದ ಅವರನ್ನು ಪೊಲೀಸರು ತಡೆದರು. ‘ಕರ್ನಾಟಕ ಮತ್ತು ಬೆಳಗಾವಿಯಲ್ಲಿ ಶಾಂತಿ ಸುವ್ಯವಸ್ಥೆಗೆ ಧಕ್ಕೆ ಆಗದಂತೆ ನೋಡಿಕೊಳ್ಳಲು ಮುನ್ನೆಚ್ಚರಿಕೆ ಕ್ರಮವಾಗಿ ಅವರಿಗೆ ಪ್ರವೇಶ ನೀಡಲಿಲ್ಲ’ ಎಂದು ಪೊಲೀಸರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.