ಬೆಂಗಳೂರು: ‘ಪ್ಲಾಸ್ಟರ್ಆಫ್ ಪ್ಯಾರಿಸ್ನಿಂದ (ಪಿಒಪಿ) ಗಣೇಶ ವಿಗ್ರಹಗಳ ಆರಾಧನೆ ಕೈಬಿಟ್ಟು, ಮಣ್ಣಿನ ವಿಗ್ರಹಗಳನ್ನು ಪೂಜಿಸಿ’ ಎಂದು ಬಿಬಿಎಂಪಿ ಮೇಯರ್ ಗಂಗಾಂಬಿಕೆ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದರು.
ಪರಿಸರಸ್ನೇಹಿ ಗಣೇಶ ವಿಗ್ರಹಗಳ ಬಳಕೆ ಉತ್ತೇಜಿಸಲು ‘ಬಾಂಧವ’ ಸಂಸ್ಥೆ ಶನಿವಾರ ಹಮ್ಮಿಕೊಂಡಿದ್ದ ಜಾಗೃತಿ ಜಾಥಾದಲ್ಲಿ ಮಾತನಾಡಿದರು.
‘ಪಿಒಪಿ ಗಣೇಶ ವಿಗ್ರಹಗಳು ನೀರಿನಲ್ಲಿ ಕರಗುವುದಿಲ್ಲ. ಅವುಗಳಿಗೆ ಬಳಸುವ ಬಣ್ಣಗಳಲ್ಲಿರುವ ರಾಸಾಯನಿಕಗಳಿಂದಾಗಿ ಕೆರೆಗಳು ಮಲಿನವಾಗಿ, ಜಲಚರಗಳು ಸಾಯುತ್ತವೆ. ಆದ್ದರಿಂದ ಪಿಒಪಿಯಿಂದ ತಯಾರಿಸಿದ ವಿಗ್ರಹಗಳ ಸಂಪೂರ್ಣ ನಿಷೇಧದ ಅನುಷ್ಠಾನಕ್ಕೆ ಸಹಕಾರ ನೀಡಬೇಕು’ ಎಂದು ಕೋರಿದರು.
ಶಾಸಕಿ ಸೌಮ್ಯಾ ರೆಡ್ಡಿ, ‘ನಗರದ ಕೆರೆಗಳ ನೀರು ಕಲುಷಿತವಾಗುತ್ತಿವೆ. ಹೆಚ್ಚುತ್ತಿರುವ ಮಾಲಿನ್ಯ ನಗರಕ್ಕೆ ಕಪ್ಪು ಚುಕ್ಕೆ’ ಎಂದರು.
5 ಸಾವಿರ ವಿತರಣೆ:ಬಾಂಧವ ಸಂಸ್ಥೆಯು ಜೇಡಿಮಣ್ಣಿನಿಂದ ತಯಾರಿಸಿದ 5,001 ಗಣೇಶ ವಿಗ್ರಹಗಳನ್ನು ಉಚಿತವಾಗಿ ವಿತರಣೆ ಮಾಡಲಿದೆ.ಶಾಲಾ ವಿದ್ಯಾರ್ಥಿಗಳೊಂದಿಗೆ ಜಾಗೃತಿ ಆಭಿಯಾನ ಹಮ್ಮಿಕೊಂಡಿದೆ.ಮಕ್ಕಳೇ ಗಣೇಶ ವಿಗ್ರಹಗಳನ್ನು ತಯಾರಿಸಲಿದ್ದಾರೆ. ಆ.31ರಂದುಜಯನಗರ ಕಾಂಪ್ಲೆಕ್ಸ್ ಸಂಕಿರಣದ ಮುಂಭಾಗ ವಿಗ್ರಹ ವಿತರಣೆ ಮಾಡಲಾಗುತ್ತದೆ. ಸಂಪರ್ಕ: 9341389999
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.