ಕಿರಣ್ ಮಜುಂದಾರ್ ಶಾ, ಡಿಕೆಶಿ
ಬೆಂಗಳೂರು: ಬೆಂಗಳೂರಿನ ರಸ್ತೆ ಗುಂಡಿಗಳು ಮತ್ತು ಕಸದ ಸಮಸ್ಯೆ ಬಗ್ಗೆ ಬಯೋಕಾನ್ ಮುಖ್ಯಸ್ಥೆ ಕಿರಣ್ ಮಜುಂದಾರ್ ಶಾ ಅವರು ಮತ್ತೆ ಡಿಸಿಎಂ ಡಿಕೆಶಿ, ಸಿಎಂ ಸಿದ್ದರಾಮಯ್ಯ ಹಾಗೂ ಐಟಿ ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ಪ್ರಶ್ನಿಸಿದ್ದಾರೆ.
‘ಇತ್ತೀಚೆಗೆ ನಮ್ಮ ಬೆಂಗಳೂರಿನ ಬಯೋಕಾನ್ ಘಟಕಕ್ಕೆ ಚೀನಾದಿಂದ ವಿದೇಶಿ ಉದ್ಯಮಿಯೊಬ್ಬರು ಬಂದಿದ್ದರು. ಈ ಊರಿನಲ್ಲಿ ಇಷ್ಟೇಕೆ ರಸ್ತೆ ಗುಂಡಿಗಳು ಇವೆ, ಕಸ ಕಣ್ಣಿಗೆ ರಾಚುತ್ತೆ ಎಂದು ಪ್ರಶ್ನಿಸಿದರು. ಭಾರತ ಹೂಡಿಕೆಗೆ ಪ್ರಶಸ್ತವಾಗಿದೆ. ಆದರೆ, ಏಕೆ ಭಾರತ ಈ ಅವಕಾಶವನ್ನು ಬಳಸಿಕೊಳ್ಳುತ್ತಿಲ್ಲ ಎಂದರು’ ಎಂದು ಮೂವರನ್ನೂ ಎಕ್ಸ್ನಲ್ಲಿ ಟ್ಯಾಗ್ ಮಾಡಿದ್ದಾರೆ.
ಇದಕ್ಕೆ ಉತ್ತರಿಸಿರುವ ಡಿಕೆಶಿ ಅವರು, ‘ಬೆಂಗಳೂರು ಲಕ್ಷಾಂತರ ಜನರಿಗೆ ಅವಕಾಶ, ಗುರುತು, ಯಶಸ್ಸು ನೀಡಿದೆಯೇ ಹೊರತು ನಿರಂತರವಾಗಿ ತೆಗಳುವುದಕ್ಕಲ್ಲ ಎಂದು ಕಿರಣ್ ಅವರ ಮೇಲೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಹೌದು ಸವಾಲುಗಳಿವೆ. ಅವುಗಳೆಲ್ಲವನ್ನೂ ಆದ್ಯತೆಮೇರೆಗೆ ಬಗೆಹರಿಸುತ್ತಿದ್ದೇವೆ. ರಸ್ತೆ ಗುಂಡಿ, ಕಸದ ಸಮಸ್ಯೆಗಳನ್ನು ಕೊನೆಗಾಣಿಸುತ್ತೇವೆ‘ ಎಂದಿದ್ದಾರೆ.
‘ಬೆಂಗಳೂರು ಪೂರ್ವ ವಿಭಾಗದ ಪಾಲಿಕೆಯಲ್ಲಿ ₹1673 ಕೋಟಿ ಇದೆ. ಈ ಹಣದಿಂದ ಈ ಭಾಗದಲ್ಲಿ ಬರುವ ಐಟಿ ಬಿಟಿ ಕಾರಿಡಾರ್ಗಳನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಲಾಗುತ್ತಿದೆ’ ಎಂದು ತಿಳಿಸಿದ್ದಾರೆ.
‘ಬೆಂಗಳೂರನ್ನು ತೆಗಳುವ ಬದಲು ಎಲ್ಲರೂ ಒಟ್ಟುಗೂಡಿ ಕೆಲಸ ಮಾಡೋಣ. ಜಗತ್ತು ಬೆಂಗಳೂರಿನ ಮೂಲಕ ಭಾರತವನ್ನು ನೋಡಲು ಬಯಸುತ್ತದೆ’ ಎಂದು
ಇದಕ್ಕೆ ಪ್ರತಿಕ್ರಿಯಿಸಿರುವ ಕಿರಣ್ ಅವರು, ನಿಮ್ಮ ವಾದವನ್ನು ನಾನು ಒಪ್ಪುತ್ತೇನೆ. ಗುಣಮಟ್ಟ ಹಾಗೂ ತ್ವರಿತ ಎಂಬ ಎರಡು ನಿಯಮಗಳನ್ನು ಅಳವಡಿಸಿಕೊಂಡು ಸಾಂಘಿಕ ಪ್ರಯತ್ನವನ್ನು ಈ ನಿಟ್ಟಿನಲ್ಲಿ ನಾವೆಲ್ಲ ಮಾಡಬೇಕಿದೆ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.