ADVERTISEMENT

ಕ್ರಿಸ್‌ಮಸ್‌ ರಜೆ: ಬಸ್ ಹತ್ತಲು ನೂಕುನುಗ್ಗಲು

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2022, 22:15 IST
Last Updated 23 ಡಿಸೆಂಬರ್ 2022, 22:15 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಕ್ರಿಸ್‌ಮಸ್‌ ಸಾಲು-ಸಾಲು ರಜೆ ಇರುವುದರಿಂದ ಹೊರ ಊರುಗಳತ್ತ ಹೊರಟಿದ್ದ ಜನ ಶುಕ್ರವಾರ ರಾತ್ರಿ ನೂಕು ನುಗ್ಗಲು ನಲ್ಲಿ ಬಸ್ ಹತ್ತಿ‌ ಪ್ರಯಾಣಿಸಿದರು.

ಮೆಜೆಸ್ಟಿಕ್ ಕೆಂಪೇಗೌಡ ಬಸ್ ನಿಲ್ದಾಣ ಮತ್ತು ಮೈಸೂರು ರಸ್ತೆ ಸ್ಯಾಟಲೈಟ್ ಬಸ್ ನಿಲ್ದಾಣಗಳಲ್ಲಿ ಬಸ್ ಗಳಿಗಾಗಿ ಜನ ಪರದಾಡಿದರು.

ಹೊರ ಊರುಗಳಿಗೆ ತೆರಳಲು ಮುಂಗಡ ಟಿಕೆಟ್ ಕಾಯ್ದಿರಿಸದೆ ನೇರವಾಗಿ ಬಸ್ ಹತ್ತಲು ಬಂದವರು ಪರದಾಡಬೇಕಾಯಿತು. ಸ್ಯಾಟಲೈಟ್ ನಿಲ್ದಾಣದಲ್ಲಿ ಮೈಸೂರು ಕಡೆಗೆ ಬಸ್ ಗಳಿಲ್ಲದೆ ರೋಸಿಹೋದ ಜನ ನಿಲ್ದಾಣದ ಅಧಿಕಾರಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ವಾಗ್ವಾದ, ಜಗಳಕ್ಕೂ ಇದು ಕಾರಣವಾಯಿತು.

ADVERTISEMENT

ಬರುವ ಒಂದೆರಡು ಬಸ್ ಗಳನ್ನು‌ ಮುಗಿಬಿದ್ದು ಹತ್ತಿದರು. ರಜೆ ಸಂದರ್ಭದಲ್ಲಿ ಜನ ಊರುಗಳತ್ತ ಪ್ರಯಾಣ ಬೆಳೆಸುವುದು ಗೊತ್ತಿದ್ದರೂ ಹೆಚ್ಚುವರಿ ಬಸ್ ಗಳ ವ್ಯವಸ್ಥೆ ಮಾಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

'ಒಮ್ಮೆಲೆ ಅನಿರೀಕ್ಷಿತವಾಗಿ ಜನ ಬಂದಿದ್ದರಿಂದ ತೊಂದರೆ ಉಂಟಾಯಿತು. ಕೂಡಲೇ ಹೆಚ್ಚುವರಿ ಬಸ್ ಗಳ ವ್ಯವಸ್ಥೆ ಮಾಡಿ ಪ್ರಯಾಣಿಕರನ್ನು ಕಳುಹಿಸಲಾಯಿತು' ಎಂದು ಕೆಎಸ್ಆರ್ ಟಿಸಿ ಅಧಿಕಾರಿಗಳು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.