ADVERTISEMENT

ಹೊಸ ತಂತ್ರಜ್ಞಾನ ಅಳವಡಿಸಿಕೊಳ್ಳಿ: ಡಾ.ವಿಜಯಲಕ್ಷ್ಮೀ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2025, 18:10 IST
Last Updated 20 ಸೆಪ್ಟೆಂಬರ್ 2025, 18:10 IST
ಕಾರ್ಯಕ್ರಮದಲ್ಲಿ ಡಾ.ವಿಜಯಲಕ್ಷ್ಮೀ ದೇಶಮಾನೆ, ಡಾ.ಎನ್.ದಯಾಸಿಂಧು, ಡಿ.ಕೆ.ಮೋಹನ್, ನಿತಿನ್ ಪಾಲ್ಗೊಂಡಿದ್ದರು.
ಕಾರ್ಯಕ್ರಮದಲ್ಲಿ ಡಾ.ವಿಜಯಲಕ್ಷ್ಮೀ ದೇಶಮಾನೆ, ಡಾ.ಎನ್.ದಯಾಸಿಂಧು, ಡಿ.ಕೆ.ಮೋಹನ್, ನಿತಿನ್ ಪಾಲ್ಗೊಂಡಿದ್ದರು.   

ಕೆ.ಆರ್.ಪುರ: ಯುವ ಸಮೂಹ ಹೊಸ ತಂತ್ರಜ್ಞಾನ ಅಳವಡಿಸಿಕೊಂಡು ಉನ್ನತ ಸಾಧನೆಯ ಕಡೆಗೆ ಸಾಗಬೇಕು ಎಂದು ಕಿದ್ವಾಯಿ ಸಂಸ್ಥೆಯ ಮಾಜಿ ನಿರ್ದೇಶಕಿ ಡಾ.ವಿಜಯಲಕ್ಷ್ಮೀ ದೇಶಮಾನೆ ಹೇಳಿದರು.

ಕೇಂಬ್ರಿಡ್ಜ್ ತಾಂತ್ರಿಕ ಮಹಾವಿದ್ಯಾಲಯದಲ್ಲಿ 2025-26ನೇ ಸಾಲಿನ ಪದವಿ ಪ್ರಥಮ ವರ್ಷದ (ಬಿ.ಇ, ಬಿ.ಟೆಕ್) ಎಂಜಿನಿಯರಿಂಗ್‌ ತರಗತಿಗಳ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.

ತಂತ್ರಜ್ಞಾನ ಕ್ಷೇತ್ರದಲ್ಲಿ ಸಾಧನೆ ಮೂಲಕ ಭಾರತ ದಾಪುಗಾಲು ಹಾಕಿದೆ. ಇದಕ್ಕೆ ಯುವ ಸಮೂಹದ ಪಾತ್ರವೂ ಮಹತ್ವದ್ದಾಗಿದೆ. ಹೊಸ ತಂತ್ರಜ್ಞಾನದಿಂದ ದೇಶ ಅಭಿವೃದ್ಧಿ ಪಥದಲ್ಲಿ ಸಾಗಲು ಅನುಕೂಲವಾಗಲಿದೆ. ಇದಕ್ಕೆ ಶೈಕ್ಷಣಿಕ ಸಂಸ್ಥೆಗಳು ನೀಡುವ ಸಹಕಾರವೂ ಅವಶ್ಯವಿದೆ ಎಂದರು.

ADVERTISEMENT

ಇತಿಹಾಸ್ ರಿಸರ್ಚ್ ಆ್ಯಂಡ್ ಡಿಜಿಟಲ್ ಸಂಸ್ಥೆಯ ಸಹ ಸಂಸ್ಥಾಪಕ ಡಾ.ಎನ್.ದಯಾಸಿಂಧು ಮಾತನಾಡಿ,  ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ವ್ಯಾಪಕವಾಗಿ ಪ್ರಚಲಿತದಲ್ಲಿದ್ದು, ಈ ಕುರಿತ ಕೋರ್ಸ್ ಗಳನ್ನು ಆಸಕ್ತಿದಾಯಕವಾಗಿ ತಿಳಿದುಕೊಂಡು ಮುನ್ನಡೆ ಸಾಧಿಸಬೇಕಿದೆ ಎಂದರು.

ಕೇಂಬ್ರಿಡ್ಜ್ ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಿ.ಕೆ.ಮೋಹನ್, ಸಿಇಒ ನಿತಿನ್ ಮೋಹನ್, ಸಲಹೆಗಾರ ಡಾ.ಕೆ.ಎನ್.ಬಾಲಸುಬ್ರಹ್ಮಣ್ಯಮೂರ್ತಿ, ಪ್ರಾಂಶುಪಾಲ ಡಾ.ಬಿ.ವಿ.ರವಿಶಂಕರ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.