ಬೆಂಗಳೂರು: ಎಚ್ಆರ್ಬಿಆರ್ ಬಡಾವಣೆ ಹಾಗೂ ಸರ್ ಎಂ. ವಿಶ್ವೇಶ್ವರಯ್ಯ ಬಡಾವಣೆಯಲ್ಲಿನ ಅನಧಿಕೃತ ನಿರ್ಮಾಣಗಳನ್ನು ತೆರವುಗೊಳಿಸಿ, ಆಸ್ತಿಯನ್ನು ಬಿಡಿಎ ಮರುವಶಪಡಿಸಿಕೊಂಡಿದೆ.
ಬಾಣಸವಾಡಿ ಗ್ರಾಮದ ಸರ್ವೆ ನಂ. 286/2, ಎಚ್ಆರ್ಬಿಆರ್ ಬಡಾವಣೆ, 1ನೇ ಬ್ಲಾಕ್ನಲ್ಲಿ ಅನಧಿಕೃತ ನಿರ್ಮಾಣಗಳನ್ನು ತೆರವುಗೊಳಿಸಿ, ಪ್ರಾಧಿಕಾರಕ್ಕೆ ಸೇರಿದ ಸುಮಾರು ₹25 ಕೋಟಿ ಮೌಲ್ಯದ 18 ಗುಂಟೆ ಪ್ರದೇಶವನ್ನು ವಶಕ್ಕೆ ಪಡೆಯಲಾಗಿದೆ.
ವಿಶ್ವೇಶ್ವರಯ್ಯ ಬಡಾವಣೆಯ 6ನೇ ಬ್ಲಾಕ್ನಲ್ಲಿ ಯಶವಂತಪುರ ಹೋಬಳಿ, ಉಲ್ಲಾಳು ಗ್ರಾಮದ ಸರ್ವೆ ನಂ. 27/1ರಲ್ಲಿ ಸುಮಾರು 6,400 ಚದರ ಅಡಿ ಪ್ರದೇಶದಲ್ಲಿ ಅನಧಿಕೃತವಾಗಿ ನಿರ್ಮಾಣವಾಗಿದ್ದ ಶೆಡ್ ತೆರವುಗೊಳಿಸಿ, ಸುಮಾರು ₹7 ಕೋಟಿ ಮೌಲ್ಯದ ಭೂಮಿಯನ್ನು ಬಿಡಿಎ ಸಿಬ್ಬಂದಿ ಬುಧವಾರ ವಶಪಡಿಸಿಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.