ಯಲಹಂಕ: ತಾಲ್ಲೂಕಿನ ಚೊಕ್ಕನಹಳ್ಳಿ ಗ್ರಾಮದಲ್ಲಿ ಅಕ್ರಮವಾಗಿ ಮಾರಾಟ ಮಾಡಿದ್ದ ಗೋಮಾಳ ಜಮೀನನ್ನು ಮತ್ತೆ ಸರ್ಕಾರದ ಸುಪರ್ದಿಗೆ ಪಡೆದಿರುವ ತಾಲ್ಲೂಕು ಆಡಳಿತ, ₹500 ಕೋಟಿ ಮೌಲ್ಯದ ಆಸ್ತಿಯನ್ನು ವಶಕ್ಕೆ ಪಡೆದಿದೆ.
ಗ್ರಾಮದ ಸರ್ವೆ ನಂ.75/4ರಲ್ಲಿ 21 ಎಕರೆ 19 ಗುಂಟೆ ಜಾಗವು ಸರ್ಕಾರಿ ಗೋಮಾಳ ಜಮೀನು ಎಂದು ದಾಖಲೆಗಳಲ್ಲಿ ಬರುತ್ತಿದ್ದರೂ ಈ ಪೈಕಿ 11 ಎಕರೆ ಜಾಗವನ್ನು ಮುನಿರಾಜು ರೆಡ್ಡಿ ಬಿನ್ ಲೇಟ್ ರಾಮರೆಡ್ಡಿ, ಪದ್ಮಮ್ಮ ಕೋಂ ಮುನಿರಾಜು ರೆಡ್ಡಿ, ಎಂ.ಪ್ರೇಮಾ ಬಿನ್ ಲೇಟ್ ಮುನಿರಾಜು ರೆಡ್ಡಿ, ರಘು ಎಂ. ಬಿನ್ ಮುನಿರಾಜು ರೆಡ್ಡಿ, ನರಸಿಂಹ ರೆಡ್ಡಿ ಬಿನ್ ಮುನಿರಾಜು ರೆಡ್ಡಿ ಎಂಬುವರು ಆಂಧ್ರ ಮೂಲಕ ಚಿತ್ತೂರ ವೆಂಕಟೇಶ್ವರ ಬಿನ್ ರಾಚಯ್ಯ ಎಂಬುವರಿಗೆ ಇದೇ ಜನವರಿ 6ರಂದು ಅಕ್ರಮವಾಗಿ ಗಾಂಧಿನಗರದ (ಕಾಚರಕನಹಳ್ಳಿ) ಹಿರಿಯ ಉಪನೋಂದಣಾಧಿಕಾರಿಗಳ ಕಚೇರಿಯಲ್ಲಿ ಕ್ರಯಪತ್ರ ಮಾಡಿಕೊಟ್ಟಿದ್ದಾರೆ ಎಂದು ತಹಶೀಲ್ದಾರ್ ಎನ್.ರಘುಮೂರ್ತಿ ತಿಳಿಸಿದರು.
ಸರ್ಕಾರಿ ಜಮೀನನ್ನು ಅಕ್ರಮವಾಗಿ ಮಾರಲು ಮತ್ತು ಖರೀದಿಸಲು ಯತ್ನಿಸಿರುವ ವ್ಯಕ್ತಿಗಳು ಹಾಗೂ ಇದಕ್ಕೆ ಸಹಕರಿಸಿರುವ ಉಪನೋಂದಣಾಧಿಕಾರಿಗಳ ವಿರುದ್ಧ ಕರ್ನಾಟಕ ಭೂಕಂದಾಯ ಕಾಯ್ದೆ ಪ್ರಕಾರ ಕಾನೂನುಕ್ರಮ ಜರುಗಿಸಬೇಕು ಎಂದು ಸಂಪಿಗೇಹಳ್ಳಿ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ ಎಂದು ಮಾಹಿತಿ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.