ADVERTISEMENT

ಕರ್ನಾಟಕ ಲೇಖಕಿಯರ ಸಂಘಕ್ಕೆ ಪದಾಧಿಕಾರಿಗಳ ನೇಮಕ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2025, 14:22 IST
Last Updated 19 ಡಿಸೆಂಬರ್ 2025, 14:22 IST
ಆರ್. ಸುನಂದಮ್ಮ ಅವರ ಜತೆಗೆ ಪದಾಧಿಕಾರಿಗಳು ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರು
ಆರ್. ಸುನಂದಮ್ಮ ಅವರ ಜತೆಗೆ ಪದಾಧಿಕಾರಿಗಳು ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರು   

ಬೆಂಗಳೂರು: ಕರ್ನಾಟಕ ಲೇಖಕಿಯರ ಸಂಘಕ್ಕೆ ಪದಾಧಿಕಾರಿಗಳು ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರನ್ನು ನೇಮಕ ಮಾಡಲಾಗಿದೆ.

ಇತ್ತೀಚೆಗೆ ಸಂಘದ ಅಧ್ಯಕ್ಷರಾಗಿ ಚುನಾಯಿತರಾಗಿದ್ದ ಆರ್. ಸುನಂದಮ್ಮ ಈ ನೇಮಕಾತಿ ಮಾಡಿದ್ದಾರೆ. ಉಪಾಧ್ಯಕ್ಷರಾಗಿ ಆರ್.ಕೆ. ಸರೋಜ ಹಾಗೂ ಸರ್ವಮಂಗಳಾ, ಕಾರ್ಯದರ್ಶಿಯಾಗಿ ಸುಮಾ ಸತೀಶ್, ಸಹ ಕಾರ್ಯದರ್ಶಿಯಾಗಿ ಬಿ.ಟಿ. ಅನುರಾಧ, ಖಜಾಂಚಿಯಾಗಿ ಲಲಿತಾ ಹೊಸಪ್ಯಾಟಿ ಅವರನ್ನು ನೇಮಿಸಲಾಗಿದೆ. 

ಲೇಖಕಿಯರಾದ ಮುಕ್ತ ಬಿ. ಕಾಗಲಿ, ಕೃಷ್ಣಾಬಾಯಿ ಹಾಗಲವಾಡಿ, ಮಧುರಾ ಕರ್ಣಂ, ಟಿ.ಟಿ. ಅನುಸೂಯಾ ಹೊಂಬಾಳೆ, ರೇಣುಕಾ ಕೋಡಗುಂಟಿ, ಮಾನಸ ಚಂದ್ರಿಕಾ, ಜ಼ಾಹಿದಾ ಶಿರೀನ್, ಜ್ಯೋತಿ ಎ., ಮಮತಾ ಕೆ.ಎನ್. ಮತ್ತು ಗೌರಿ ಅವರನ್ನು ಕಾರ್ಯಕಾರಿ ಸಮಿತಿಗೆ ನೇಮಕ ಮಾಡಲಾಗಿದೆ ಎಂದು ಸುನಂದಮ್ಮ ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.