ADVERTISEMENT

ತರಕಾರಿಗಳಿಗೆ ಪ್ಲಾಸ್ಟಿಕ್ ರ‍್ಯಾಪರ್ ಬಳಸಿದರೆ ಕ್ರಮ: ಡಾ. ಕೆ. ಸುಧಾಕರ್

​ಪ್ರಜಾವಾಣಿ ವಾರ್ತೆ
Published 28 ಆಗಸ್ಟ್ 2019, 20:16 IST
Last Updated 28 ಆಗಸ್ಟ್ 2019, 20:16 IST
ಕೆ. ಸುಧಾಕರ್ ಅವರು ಮಳಿಗೆಯಲ್ಲಿ ತರಕಾರಿಗಳಿಗೆ ಪ್ಲಾಸ್ಟಿಕ್ ರ‍್ಯಾಪರ್ ಬಳಕೆ ಮಾಡಿರುವುದನ್ನು ಪರಿಶೀಲಿಸಿದರು
ಕೆ. ಸುಧಾಕರ್ ಅವರು ಮಳಿಗೆಯಲ್ಲಿ ತರಕಾರಿಗಳಿಗೆ ಪ್ಲಾಸ್ಟಿಕ್ ರ‍್ಯಾಪರ್ ಬಳಕೆ ಮಾಡಿರುವುದನ್ನು ಪರಿಶೀಲಿಸಿದರು   

ಬೆಂಗಳೂರು: ‘ಹಣ್ಣು–ತರಕಾರಿಗಳಿಗೆ ನಿಷೇಧಿತ ಪ್ಲಾಸ್ಟಿಕ್‌ ರ‍್ಯಾಪರ್ ಬಳಸಿ ಮಾರಾಟ ಮಾಡಿದರೆ ಅಂತಹ ಮಳಿಗೆಗಳ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು’ ಎಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಡಾ. ಕೆ. ಸುಧಾಕರ್ ಎಚ್ಚರಿಕೆ ನೀಡಿದರು.

ಸದಾಶಿವನಗರದಲ್ಲಿರುವ ಗೋದ್ರೆಜ್‌ ನೇಚರ್ ಬ್ಯಾಸ್ಕೆಟ್, ನಾಮ್‌ದಾರಿ ಫ್ರೆಶ್ ಹಾಗೂ ಬ್ರಿಗೇಡ್ ರಸ್ತೆಯಲ್ಲಿರುವ ನೀಲಗಿರಿ ಶಾಪಿಂಗ್ ಮಳಿಗೆಗಳ ಮೇಲೆ ಸುಧಾಕರ್ ನೇತೃತ್ವದ ತಂಡಬುಧವಾರ ದಿಢೀರ್ ದಾಳಿ ನಡೆಸಿತು. ಈ ವೇಳೆ ಹಣ್ಣು ಹಾಗೂ ತರಕಾರಿಗಳಿಗೆ ಪ್ಲಾಸ್ಟಿಕ್‌ ರ‍್ಯಾಪರ್ ಬಳಸಿರುವುದು ಕಂಡು ಬಂತು. ಇವುಗಳನ್ನು ಮುಟ್ಟುಗೋಲು ಹಾಕಿಕೊಳ್ಳುವಂತೆ ಸೂಚಿಸಿದ ಮಂಡಳಿ ಅಧ್ಯಕ್ಷ, ಮಳಿಗೆಯ ಮೇಲೆ ಶಿಸ್ತುಕ್ರಮ ಕೈಗುಳ್ಳುವಂತೆ ಅಧಿಕಾರಿಗಳಿಗೆ ಆದೇಶಿಸಿದರು.

ಅಧಿಕಾರಿಗಳ ವಿರುದ್ಧ ಕ್ರಮ: ‘ನಿಷೇಧಿತ ಪ್ಲಾಸ್ಟಿಕ್‍ ಬಳಸುತ್ತಿರುವ ಅಂಗಡಿಗಳ ಮೇಲೆ ಕ್ರಮ ಕೈಗೊಳ್ಳದಿದ್ದರೆ ಆಯಾ ವಲಯ ಆರೋಗ್ಯಾಧಿಕಾರಿಗಳ ಮೇಲೆ ಶಿಸ್ತು ಕ್ರಮ ತೆಗೆದುಕೊಳ್ಳಲಾಗುವುದು.ಆಗಾಗ ಅಂಗಡಿಗಳ ಮೇಲೆ ದಾಳಿ ಮಾಡಿ, ಪರಿಶೀಲನೆ ನಡೆಸುವಂತೆ ಬಿಬಿಎಂಪಿ ಆರೋಗ್ಯಾಧಿಕಾರಿ ಅವರಿಗೂ ಸೂಚನೆ ನೀಡಿದ್ದೇನೆ’ ಎಂದು ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.