ADVERTISEMENT

‘ಪ್ರಜಾವಾಣಿ@75’: ಏಪ್ರಿಲ್‌ 1ರಂದು ನೀರಿಗಾಗಿ ನಡಿಗೆ

​ಪ್ರಜಾವಾಣಿ ವಾರ್ತೆ
Published 31 ಮಾರ್ಚ್ 2023, 16:38 IST
Last Updated 31 ಮಾರ್ಚ್ 2023, 16:38 IST
   

ಬೆಂಗಳೂರು: ವಿಶ್ವಜಲ ದಿನ ಹಾಗೂ ಪ್ರಜಾವಾಣಿ@75 ಅಂಗವಾಗಿ ‘ಪ್ರಜಾವಾಣಿ–ಡೆಕ್ಕನ್‌ ಹೆರಾಲ್ಡ್‌’ ವತಿಯಿಂದ ಏ.1ರ ಶನಿವಾರ ಬೆಳಿಗ್ಗೆ 6.30ಕ್ಕೆ ‘ನೀರಿಗಾಗಿ ನಡಿಗೆ’ ಆಯೋಜಿಸಲಾಗಿದೆ.

ನಗರ ಪೊಲೀಸ್‌ ಕಮಿಷನರ್‌ ಪ್ರತಾಪ ರೆಡ್ಡಿ, ಸಂಚಾರ ವಿಭಾಗದ ವಿಶೇಷ ಕಮಿಷನರ್‌ ಎಂ.ಎ. ಸಲೀಂ ಹಾಗೂ ಚಲನಚಿತ್ರ ನಟ ರಿಷಿ ಅವರು ಮಹಾತ್ಮಗಾಂಧಿ ರಸ್ತೆಯ ಟ್ರಿನಿಟಿ ವೃತ್ತದಲ್ಲಿ ಆರಂಭವಾಗುವ ವಾಕಥಾನ್‌ಗೆ ಚಾಲನೆ ನೀಡಲಿದ್ದಾರೆ.

ಕಬ್ಬನ್‌ ಪಾರ್ಕ್‌ನ ಪ್ರೆಸ್‌ಕ್ಲಬ್‌ ಆವರಣದಲ್ಲಿ ವಾಕಥಾನ್‌ ಮುಕ್ತಾಯಗೊಳ್ಳಲಿದ್ದು, ಪಿಇಎಸ್‌ ವಿವಿ ಕುಲಪತಿ ಎಂ.ಆರ್‌. ದೊರೆಸ್ವಾಮಿ, ‘ಪ್ರಜಾವಾಣಿ’ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್ಟ ಅವರು ಪ್ರಮಾಣಪತ್ರ ವಿತರಿಸಲಿದ್ದಾರೆ.

ADVERTISEMENT
ವಾಕಥಾನ್‌ ಹಾದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.