ADVERTISEMENT

ಬೀದರ್: ಆಸ್ಪತ್ರೆಗೆ ಆಂಬುಲನ್ಸ್ ಕೊಡುಗೆ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2021, 3:00 IST
Last Updated 3 ಮಾರ್ಚ್ 2021, 3:00 IST
ಬಸವಕಲ್ಯಾಣ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಗೆ ಕೊಡುಗೆಯಾಗಿ ನೀಡಿರುವ ಶ್ರದ್ಧಾಂಜಲಿ ಆಂಬುಲನ್ಸ್‌ನ್ನು ರಾಜಸ್ಥಾನ್ ಸಂಘ ಕರ್ನಾಟಕದ ಪದಾಧಿಕಾರಿಗಳು ಬೀದರ್‌ನಲ್ಲಿ ಸೋಮವಾರ ಡಿಎಚ್‌ಒ ಅವರಿಗೆ ಹಸ್ತಾಂತರಿಸಿದರು
ಬಸವಕಲ್ಯಾಣ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಗೆ ಕೊಡುಗೆಯಾಗಿ ನೀಡಿರುವ ಶ್ರದ್ಧಾಂಜಲಿ ಆಂಬುಲನ್ಸ್‌ನ್ನು ರಾಜಸ್ಥಾನ್ ಸಂಘ ಕರ್ನಾಟಕದ ಪದಾಧಿಕಾರಿಗಳು ಬೀದರ್‌ನಲ್ಲಿ ಸೋಮವಾರ ಡಿಎಚ್‌ಒ ಅವರಿಗೆ ಹಸ್ತಾಂತರಿಸಿದರು   

ಬೀದರ್: ಬೆಂಗಳೂರಿನ ರಾಜಸ್ಥಾನ್ ಸಂಘ ಕರ್ನಾಟಕ ಸ್ವಯಂ ಸೇವಾ ಸಂಸ್ಥೆಯು ಬಸವಕಲ್ಯಾಣ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಗೆ ಶ್ರದ್ಧಾಂಜಲಿ ಆಂಬುಲನ್ಸ್ ಕೊಡುಗೆಯಾಗಿ ನೀಡಿದೆ.

ಸಂಸ್ಥೆಯ ಅಧ್ಯಕ್ಷೆ ರತ್ನಿಬಾಯಿ ಮೆಹ್ತಾ, ಮುಖ್ಯಸ್ಥ ಅಶೋಕ ಚೋಪ್ರಾ ಹಾಗೂ ಸಂಯೋಜಕ ಬಸವರಾಜ ಬುಳ್ಳಾ ಅವರು ನಗರದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ವಿ.ಜಿ. ರೆಡ್ಡಿ ಅವರಿಗೆ ಆಂಬುಲನ್ಸ್ ಹಸ್ತಾಂತರಿಸಿದರು.

ಶವ ಸಾಗಣೆಗೆ ನೆರವಾಗಲು ಬಸವಕಲ್ಯಾಣ ಸಾರ್ವಜನಿಕ ಆಸ್ಪತ್ರೆಗೆ ₹25 ಲಕ್ಷ ಮೌಲ್ಯದ ಆಂಬುಲನ್ಸ್ ಕೊಡಲಾಗಿದ್ದು, ಸಾರ್ವಜನಿಕರಿಗೆ ಸಂಪೂರ್ಣ ಉಚಿತ ಸೇವೆ ಒದಗಿಸಲಿದೆ ಎಂದು ಬಸವರಾಜ ಬುಳ್ಳಾ ತಿಳಿಸಿದರು.

ADVERTISEMENT

ರಾಜಸ್ಥಾನ್ ಸಂಘ ಕರ್ನಾಟಕವು ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿ ಕೊಂಡಿದೆ. ಹಲವಾರು ಜನಪರ ಕಾರ್ಯಗಳನ್ನು ಕೈಗೊಂಡಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.