ADVERTISEMENT

ಹನೂರು: ಏತನೀರಾವರಿ ಯೋಜನೆ ಒತ್ತಾಯಿಸಿ ಅಹೋರಾತ್ರಿ ಧರಣಿ 43 ನೇ ದಿನಕ್ಕೆ

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2025, 2:32 IST
Last Updated 9 ಡಿಸೆಂಬರ್ 2025, 2:32 IST
ಹನೂರು ತಾಲೂಕಿನ ಕಾವೇರಿ ನದಿಯಿಂದ ದಂಟಳ್ಳಿ ಮಾರ್ಗವಾಗಿ ಏತನೀರಾವರಿ ಯೋಜನೆ ಕಲ್ಪಿಸುವಂತೆ ರೈತ ಸಂಘಟನೆ ನಡೆಸುತ್ತಿರುವ ಅಹೋರಾತ್ರಿ ಧರಣಿ 43 ನೇ ದಿನವೂ ಮುಂದುವರೆಯಿತು
ಹನೂರು ತಾಲೂಕಿನ ಕಾವೇರಿ ನದಿಯಿಂದ ದಂಟಳ್ಳಿ ಮಾರ್ಗವಾಗಿ ಏತನೀರಾವರಿ ಯೋಜನೆ ಕಲ್ಪಿಸುವಂತೆ ರೈತ ಸಂಘಟನೆ ನಡೆಸುತ್ತಿರುವ ಅಹೋರಾತ್ರಿ ಧರಣಿ 43 ನೇ ದಿನವೂ ಮುಂದುವರೆಯಿತು   

ಹನೂರು: ಕಾವೇರಿ ನದಿಯಿಂದ ದಂಟಳ್ಳಿ ಮಾರ್ಗವಾಗಿ ಏತನೀರಾವರಿ ಯೋಜನೆ ಕಲ್ಪಿಸುವಂತೆ ರೈತ ಸಂಘಟನೆ ನಡೆಸುತ್ತಿರುವ ಅಹೋರಾತ್ರಿ ಧರಣಿ 43 ನೇ ದಿನವೂ ಮುಂದುವರೆದಿದ್ದು, ಸೋಮವಾರ ಕೆಆರ್‌ಎಸ್ ಪಕ್ಷದ ಕಾರ್ಯಕರ್ತರು ಸ್ಥಳಕ್ಕೆ ಧಾವಿಸಿ ಬೆಂಬಲ ನೀಡಿದರು

ಕೆಆರ್‌ಎಸ್ ಪಕ್ಷದ ರಾಜ್ಯ ಘಟಕದ ಮಹಿಳಾ ಉಪಾಧ್ಯಕ್ಷೆ ಮಹದೇವಮ್ಮ ಮಾತನಾಡಿ, ರಾಜಕಾರಣಿಗಳು ಮತಕೇಳಲು ಬಂದಾಗ ಗೋವಿನ ತರ ಬರುತ್ತಾರೆ, ಗೆದ್ದ ನಂತರ ಗೋಮುಖ ವ್ಯಾಘ್ರರಾಗಿ ವರ್ತಿಸುತ್ತಿದ್ದಾರೆ. ನೀವು ತಿನ್ನುತ್ತಿರುವುದು ರೈತರ ಬೆಳೆ, ಚಿನ್ನ–ಬೆಳ್ಳಿ ತಿಂತೀರಾ? ನಿಮಗೆ ಮಾನ ಮರ್ಯಾದೆ ಇದ್ರೆ ಮೊದಲು ಅಂತರ್ಜಲ ಅಭಿವೃದ್ಧಿಗೆ ನೀರು ಕೊಡಿ ಅಯೋಗ್ಯರೇ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಧರಣಿಯಲ್ಲಿ ಮೈಸೂರು ಜಿಲ್ಲೆಯ ಪ್ರಧಾನ ಕಾರ್ಯದರ್ಶಿ ನೇತ್ರ, ರಾಜ್ಯ ಸಂಘಟನಾ ಕಾರ್ಯದರ್ಶಿ ಶ್ರೀನಿವಾಸ ಶಾಸ್ತ್ರಿ, ಚಾಮರಾಜನಗರ ಜಿಲ್ಲಾ ಧ್ಯಕ್ಷ ಗಿರೀಶ್, ಮಂಡ್ಯ ಜಿಲ್ಲೆಯ ಜಿಲ್ಲಾಧ್ಯಕ್ಷ ಶಿವಮೂರ್ತಿ, ಶೈಲೇಂದ್ರ, ಆರ್. ಅರ್ಪುದರಾಜ್, ವಸಂತ ಕುಮಾರ್, ಮಾಜಿ ಸೈನಿಕ ಮರಿಯ ಜೋಸೆಫ್, ಪುಟ್ಟ ಸ್ವಾಮಿ, ಲೂರ್ದುಸ್ವಾಮಿ, ಪೀಟರ್, ಸೂಸೈ ಮಾಣಿಕ್ಯ, ಸಿರಿಲ್, ಜೈದೀಪ್, ಪೌಲ್ ಧರ್ಮರಾಜ್, ಫ್ರಾನ್ಸಿಸ್ ಸೆಲ್ವಂ, ಸೆಲ್ವ ಮೇರಿ, ಸಗಾಯಮೇರಿ, ಡೇವಿಡ್ ರಾಜ, ಪ್ರೇಮ, ಮರಿಯ, ಸುಳ್ವಾಡಿ ರಾಜು, ಅಂಥೋನಿ ಸ್ವಾಮಿ ಇದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.