ADVERTISEMENT

ಅಂತರ್ಜಾತಿ ಪ್ರೇಮ ವಿವಾಹ; ಠಾಣೆ ಮೆಟ್ಟಿಲೇರಿದ ವಿವಾದ

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2023, 6:38 IST
Last Updated 7 ಆಗಸ್ಟ್ 2023, 6:38 IST
   

ಚಿಕ್ಕಬಳ್ಳಾಪುರ: ಗುಡಿಬಂಡೆ ತಾಲ್ಲೂಕಿನ ಜಂಬಿಗೆ ಮರದಹಳ್ಳಿಯ ಭಾನುಶ್ರೀ ಮತ್ತು ಚಿಕ್ಕಬಳ್ಳಾಪುರ ತಾಲ್ಲೂಕಿನ ಕಾಮಶೆಟ್ಟಿಹಳ್ಳಿ ಗ್ರಾಮದ ಮಧುಸೂದನ್ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದೆ.

ಪರಿಶಿಷ್ಟ ಪಂಗಡದ ಮಧುಸೂದನ್ ಮತ್ತು ಬಲಿಜ ಸಮುದಾಯದ ಭಾನುಶ್ರೀ ಪ್ರೀತಿಸಿ ವಿವಾಹ ಆಗಿದ್ದರು‌. ಮನೆಯವರಿಗೆ ಈ ಪೀತಿಯ ವಿಚಾರ ತಿಳಿದಿದ್ದರೂ ಜಾತಿ ಕಾರಣಕ್ಕಾಗಿ ವಿವಾಹಕ್ಕೆ ಒಪ್ಪಿರಲಿಲ್ಲ‌. ಆದರೆ ಇಬ್ಬರು ದೇವಾಲಯದಲ್ಲಿ ವಿವಾಹ ಆಗಿದ್ದಾರೆ.

ನಂತರ ಯುವತಿ ಪೋಷಕರು ಗುಡಿಬಂಡೆ ಪೊಲೀಸ್ ಠಾಣೆಯಲ್ಲಿ ಮಗಳು ಕಾಣಿಯಾಗಿದ್ದಾಳೆ ಎಂದು ದೂರು ನೀಡಿದ್ದರು. ನಂತರ ಈ ಇಬ್ಬರು ಹಾಗೂ ಪೋಷಕರನ್ನು ಕರೆಯಿಸಿ ಗುಡಿಬಂಡೆ ಠಾಣೆ ಪೊಲೀಸರು ಮಾತುಕತೆ ನಡೆಸಿದ್ದಾರೆ. ಭಾನುಶ್ರೀ, ಮಧುಸೂದನ್ ಜೊತೆ ತೆರಳುವುದಾಗಿ ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.