ADVERTISEMENT

ಮರುಮೌಲ್ಯಮಾಪನ: ಸ್ಪಂದನ, ರಾಜರಾಜೇಶ್ವರಿಗೆ ಹೆಚ್ಚು ಅಂಕ

​ಪ್ರಜಾವಾಣಿ ವಾರ್ತೆ
Published 23 ಮೇ 2025, 12:25 IST
Last Updated 23 ಮೇ 2025, 12:25 IST
ಬಾಗೇಪಲ್ಲಿ ಬಿಜಿಎಸ್ ಶಾಲೆಯ ವಿ.ಸ್ಪಂದನ, ರಾಜರಾಜೇಶ್ವರಿ ಅವರನ್ನು ಸರ್ಕಲ್ ಇನ್‌ಸ್ಪೆಕ್ಟರ್ ಪ್ರಶಾಂತ್ ವರ್ಣಿ, ಪ್ರಾಂಶುಪಾಲ ಮುನಿರಾಜು ಗೌರವಿಸಿದರು. ಪೋಷಕರು ಇದ್ದರು
ಬಾಗೇಪಲ್ಲಿ ಬಿಜಿಎಸ್ ಶಾಲೆಯ ವಿ.ಸ್ಪಂದನ, ರಾಜರಾಜೇಶ್ವರಿ ಅವರನ್ನು ಸರ್ಕಲ್ ಇನ್‌ಸ್ಪೆಕ್ಟರ್ ಪ್ರಶಾಂತ್ ವರ್ಣಿ, ಪ್ರಾಂಶುಪಾಲ ಮುನಿರಾಜು ಗೌರವಿಸಿದರು. ಪೋಷಕರು ಇದ್ದರು   

ಬಾಗೇಪಲ್ಲಿ: ಪಟ್ಟಣದ ಬಿಜಿಎಸ್ ಶಾಲೆಯ ವಿದ್ಯಾರ್ಥಿನಿ ವಿ.ಸ್ಪಂದನ ಎಸ್‍ಎಸ್‍ಎಲ್‍ಸಿ ಪರೀಕ್ಷೆಯ ಮರು ಮೌಲ್ಯಮಾಪನದಲ್ಲಿ 625 ಕ್ಕೆ 624 ಅಂಕ ಪಡೆದು ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದಿದ್ದಾರೆ.

ಎಸ್‍ಎಸ್‍ಎಲ್‍ಸಿ ಪರೀಕ್ಷೆಯ ಕನ್ನಡ ವಿಷಯದಲ್ಲಿ 125 ಕ್ಕೆ 124, ಸಮಾಜ ವಿಜ್ಞಾನ ವಿಷಯದಲ್ಲಿ 100ಕ್ಕೆ 98 ಅಂಕ ಪಡೆದಿದ್ದರು. ವಿ.ಸ್ಪಂದನ ಹಾಗೂ ಪೋಷಕರು ಪರೀಕ್ಷೆಯ ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಿದ್ದರು. ಮರುಮೌಲ್ಯಮಾಪನದಲ್ಲಿ ಕನ್ನಡ ವಿಷಯದಲ್ಲಿ ಒಂದು ಅಂಕ, ಸಮಾಜ ವಿಜ್ಞಾನದಲ್ಲಿ 2 ಅಂಕ ಹೆಚ್ಚು ಪಡೆದಿದ್ದಾರೆ. ಇದೀಗ 625ಕ್ಕೆ 624 ಅಂಕ ಪಡೆದು ರಾಜ್ಯದಲ್ಲಿ ದ್ವಿತೀಯ ಸ್ಥಾನದಲ್ಲಿ ಇದ್ದಾರೆ.

ಪಟ್ಟಣದ ಕುಂಬಾಪೇಟೆಯ ನಿವಾಸಿ ಪಾರ್ವತಿ ಮತ್ತು ಹೇಮಚಂದ್ರ ಪುತ್ರಿ, ಬಿಜಿಎಸ್ ಶಾಲೆಯ ವಿದ್ಯಾರ್ಥಿನಿ ಬಿ.ಎಚ್.ರಾಜರಾಜೇಶ್ವರಿ ಎಸ್‍ಎಸ್‍ಎಲ್‍ಸಿ ಪರೀಕ್ಷೆಯ ಮರು ಮೌಲ್ಯಮಾಪನದಲ್ಲಿ 625ಕ್ಕೆ 623 ಅಂಕ ಪಡೆದಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.