ADVERTISEMENT

ಆಲ್ದೂರು: ಚಾಕುವಿನಿಂದ ಇರಿದು ಮಹಿಳೆಯ ಕೊಲೆ

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2025, 12:18 IST
Last Updated 2 ಡಿಸೆಂಬರ್ 2025, 12:18 IST
   

ಆಲ್ದೂರು(ಚಿಕ್ಕಮಗಳೂರು): ಸಮೀಪದ ಬಸರವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅರೇನೂರು ಗ್ರಾಮದ ಗೃಹಿಣಿಯೊಬ್ಬರನ್ನು ಚಾಕುವಿನ ಇರಿದು ಕೊಲೆ ಮಾಡಿರುವ ಘಟನೆ ಮಂಗಳವಾರ ಬೆಳಿಗ್ಗೆ ನಡೆದಿದೆ.

ಸಂಧ್ಯಾ ರವಿ(32) ಮೃತಪಟ್ಟವರು. ಇವರು ಅರೇನೂರು ಗ್ರಾಮದ ನೋಣಯ್ಯ ಮತ್ತು ಕವಿತಾ ದಂಪತಿಯ ಪುತ್ರಿ. ಕೆಲ ವರ್ಷಗಳ ಹಿಂದೆ ಕಡಬಗೆರೆ ಶಿರಗೋಳ ಗ್ರಾಮದ ರವಿ ಎಂಬುವರೊಂದಿಗೆ ವಿವಾಹವಾಗಿತ್ತು.

ಮೂರು ಮಕ್ಕಳಿದ್ದು, ಮೂರು ವರ್ಷಗಳಿಂದ ಪತಿಯಿಂದ ದೂರವಿದ್ದು ತವರು ಮನೆಯಲ್ಲೇ ಇದ್ದರು. ಮನೆಯ ಸ್ನಾನಗೃಹದ ಬಟ್ಟೆ ಒಗೆಯುವ ಕಲ್ಲಿನ ಬಳಿ ಅಪರಿಚಿತರು ಸಂಧ್ಯಾ ಅವರ ಕುತ್ತಿಗೆ ಭಾಗಕ್ಕೆ ಚಾಕುವಿನಿಂದ ಇರಿದು ಪರಾರಿಯಾಗಿದ್ದಾರೆ.

ADVERTISEMENT

ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ಪ್ರಜ್ಞೆ ಕಳೆದುಕೊಂಡಿದ್ದು, ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ.

ಸಂಧ್ಯಾ ಅವರ ಸಹೋದರ ಸತೀಶ್ ಆಲ್ದೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.