
ಪುತ್ತೂರು: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಲ್ಲಿ ಮಹಾತ್ಮ ಗಾಂಧಿ ಹೆಸರು ಬದಲಾಯಿಸಿ, ಯೋಜನೆಯ ಮೂಲ ಸ್ವರೂಪವನ್ನೇ ಬದಲಾಯಿಸಿರುವ ಕೇಂದ್ರ ಸರ್ಕಾರದ ವಿರುದ್ಧ ಪುತ್ತೂರು, ವಿಟ್ಲ ಹಾಗೂ ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ನೇತೃತ್ವದಲ್ಲಿ ಶುಕ್ರವಾರ ಪುತ್ತೂರಿನ ಬಸ್ ನಿಲ್ದಾಣದ ಬಳಿಯ ಗಾಂಧಿಕಟ್ಟೆಯಲ್ಲಿ ಸತ್ಯಾಗ್ರಹ ನಡೆಯಿತು.
ಕೆಪಿಸಿಸಿ ಸಂಯೋಜಕ ಕಾವು ಹೇಮನಾಥ ಶೆಟ್ಟಿ ಮಾತನಾಡಿ, 2014ರ ಬಳಿಕ ದೇಶದಲ್ಲಿ ಮತ್ತೆ ಬಡತನ ಬೆಳೆಸುವ ಕೆಲಸವಾಗುತ್ತಿದೆ. ನರೇಂದ್ರ ಮೋದಿಯವರು ದೇಶದಿಂದ ತೊಲಗುವ ತನಕ ದೇಶಕ್ಕೆ ಶಾಂತಿ, ನೆಮ್ಮದಿಯಿಲ್ಲ. ಯಾವುದೇ ಅಭಿವೃದ್ಧಿ ಸಾಧ್ಯವಿಲ್ಲ. ಅವರು ಹೆಸರು ಬದಲಾವಣೆ ಮಾಡುವುದರಲ್ಲಿ ಕಾಲ ಕಳೆಯುತ್ತಿದ್ದಾರೆ. ದೇಶವನ್ನು ಉಳಿಸಲು ಮಹಾತ್ಮ ಗಾಂಧಿ ಹೋರಾಟ ಮಾಡಿದಂತೆ ಮೋದಿ ಅವರನ್ನು ದೇಶದಿಂದ ತೊಲಗಿಸುವ ದಿನ ಬರಲಿದೆ ಎಂದರು.
ಜಿಲ್ಲಾ ಕಾಂಗ್ರೆಸ್ ವಕ್ತಾರ ಮಹಮ್ಮದ್ ಬಡಗನ್ನೂರು ಮಾತನಾಡಿದರು.
ಕಾಂಗ್ರೆಸ್ ಮುಖಂಡರಾದ ಮಹಮ್ಮದ್ ಅಲಿ, ಕೃಷ್ಣಪ್ರಸಾದ್ ಆಳ್ವ, ಅಮಲ ರಾಮಚಂದ್ರ, ಚಿತ್ತರಂಜನ್ ಬೊಂಡಾಲ, ಸೇಸಪ್ಪನೆಕ್ಕಿಲು ಮಾತನಾಡಿದರು.
ಪ್ರಮುಖರಾದ ಪದ್ಮನಾಭ ಪೂಜಾರಿ, ಯು.ಟಿ ತೌಸೀಫ್, ಪ್ರಸಾದ್ ಕೌಶಲ್ ಶೆಟ್ಟಿ, ರವಿಪ್ರಸಾದ್ ಶೆಟ್ಟಿ ಬನ್ನೂರು, ಶರೂನ್ ಸಿಕ್ವೇರಾ, ಫಾರೂಕ್ ಪೆರ್ನೆ, ಅಬ್ಬು ನವಗ್ರಾಮ, ನಝೀರ್ ಮಠ, ಶಿವಪ್ರಸಾದ್ ರೈ ಮಠಂತಬೆಟ್ಟು, ನೂರುದ್ದೀನ್ ಸಾಲ್ಮರ, ರೋಷನ್ ಬನ್ನೂರು, ಚಂದ್ರಹಾಸ ರೈ ಬೋಳೋಡಿ, ಸುಪ್ರೀತ್ ಕಣ್ಣಾರಾಯ, ಸಂತೋಷ್ ಭಂಡಾರಿ ಚಿಲ್ಮೆತ್ತಾರು, ಅರ್ಷದ್ ದರ್ಬೆ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.